
ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯ ದಲ್ಲಿ ಬೆಂಗಳೂರಿನ ಬಸವನ ಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಕಾಸರಗೋಡಿನ ಶ್ರಿಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ ಪ್ರದರ್ಶಿಸಲ್ಪಟ್ಟ ಬೊಂಬೆಯಾಟವು ಜನಮೆಚ್ಚುಗೆ ಪಡೆಯಿತು.ರಂಗದಲ್ಲಿ ವಿಜ್ರಂಭಿಸಿದ ಗಡಿನಾಡ ಬೊಂಬೆಗಳನ್ನು ವೀಕ್ಷಿಸಲು ಜನಸಾಗರವೇ ನೆರೆದಿತ್ತು.
ಇನ್ಫೋಸಿಸ್ನ ಮುಖ್ಯಸ್ಥೆ ಸುಧಾಮೂರ್ತಿಯವರ ಉಪಸ್ಥಿತಿಯಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಭಾರತೀಯ ವಿದ್ಯಾಭವನದ ಸುರೇಶ್, ಇನ್ಫೋಸಿಸ್ನ ಆಡಳಿತಾಧಿಕಾರಿ ಗಳಾದ ಪೆಮ್ಮಯ್ಯ, ಸಿ.ಎನ್. ಅಶೋಕ್ ಕುಮಾರ್ ಭಾಗವಹಿಸಿದ್ದರು. ಶ್ರಿಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ್ ನೇತೃತ್ವದ ತಂಡದಲ್ಲಿ ಅರವಿಂದ್ ಶಾನುಭೋಗ್, ಪ್ರಸನ್ನ ರಾವ್, ಸುದರ್ಶನ.ಕೆ.ವಿ., ಕುಮಾರಸ್ವಾಮಿ, ಆತ್ಮೀಯಕೃಷ್ಣ, ಗೀತಾ ವೇಣುಗೋಪಾಲ್, ಅನಿತಾ ರವಿಕುಮಾರ್ ಬೊಂಬೆಗಳನ್ನು ಕುಣಿಸುವಲ್ಲಿ ವಿಶೇಷ ಸಾಧನೆ ಮೆರೆದರು.
‘ನರಕಾಸುರ ವಧೆ’,‘ಗರುಡ ಗರ್ವಭಂಗ’ ಪ್ರಸಂಗವನ್ನು ಪೂರ್ತಿ ವೀಕ್ಷಿಸಿದ ಸುಧಾಮೂರ್ತಿಯವರು ಅದ್ಭುತ ಕೈ ಚಳಕದಲ್ಲಿ ಬೊಂಬೆ ಕುಣಿಸುವ ರೀತಿಯನ್ನು ಪ್ರಶಂಸಿಸಿದರು. ಕೆ.ವಿ. ರಮೇಶ್ ಪ್ರಾತ್ಯಕ್ಷಿಕೆ ನೀಡಿದರು. ಭಾರತೀಯ ಕಲೆಗಳಲ್ಲೇ ವಿಶಿಷ್ಟವಾಗಿರುವ ಈ ಕಲೆಯ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ ಸುಧಾಮೂರ್ತಿಯವರನ್ನು ಶ್ರಿಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಪರವಾಗಿ ಗೀತಾ ವೇಣುಗೋಪಾಲ್ ಸನ್ಮಾನಿಸಿದರು.
ಪ್ರಾಗ್ನಲ್ಲಿ ಜರಗಿದ ಜಾಗತಿಕ ಬೊಂಬೆಯಾಟ ಉತ್ಸವದಲ್ಲಿ ಭಾಗವಹಿಸಿ ಸ್ವದೇಶಕ್ಕಾಗಮಿಸಿದ ಬಳಿಕ ಕೆ.ವಿ.ರಮೇಶ್ ಮತ್ತು ತಂಡ ಮೊದಲ ಬಾರಿಗೆ ನೀಡಿದ ಪ್ರದರ್ಶನವಿದಾಗಿದ್ದು,ಸರ್ವರಿಂದಲೂ ಮುಕ್ತ ಕಂಠದಿಂದ ಪ್ರಶಂಸಿಸಲ್ಪಟ್ಟಿತು.
ಪರಂಪರಾಗತವಾಗಿ ಬಂದ ಬೊಂಬೆ ಯಾಟ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆ.ವಿ.ರಮೇಶ್ ನೇತೃತ್ವದ ತಂಡ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ವಂಶಜರಾದ ಇವರಿಗೆ ಸಹಜವಾಗಿಯೇ ಈ ಕಲೆ ಸಿದ್ಧಿಸಿದ್ದು, ಕಳೆದ ಮೂವತ್ತು ವರ್ಷಗಳಿಂದ ದೇಶ-ವಿದೇಶಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...