ಸಂಗ್ರಹಣೆ...  ಅದೊಂದು ಉತ್ತಮ ಅಭಿರುಚಿ
mail-img print-img

ಸಂಗ್ರಹಣೆ... ಅದೊಂದು ಉತ್ತಮ ಅಭಿರುಚಿ

ಶನಿವಾರ - ಸೆಪ್ಟೆಂಬರ್ -04-2010

ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ರೀತಿಯ ಅಭ್ಯಾಸ ಇರುತ್ತದೆ. ಅದೊಂದು ರೀತಿ ಹವ್ಯಾಸ. ಅವುಗಳಲ್ಲಿ ಕೆಲವು ಈ ರೀತಿ ಇರುತ್ತವೆ.
* ಸ್ಟಾಂಪ್ ಕಲೆಕ್ಷನ್.

* ಹಳೆಯ ನಾಣ್ಯಗಳ ಸಂಗ್ರಹ

* ಹಳೆಯ ನೋಟುಗಳ ಸಂಗ್ರಹ

* ಕನ್ನಡಕಗಳ ಸಂಗ್ರಹ

* ಪೆನ್ನುಗಳ ಸಂಗ್ರಹ

* ಚಮಚಗಳ ಸಂಗ್ರಹ

ಈ ರೀತಿ ಒಬ್ಬೊಬ್ಬ್ಬರ ಅಭ್ಯಾಸ ಒಂದೊಂದು ರೀತಿ ಇರುತ್ತದೆ.ಕೆಲವರ ಮನೆಯಲ್ಲಿ ಹತ್ತಾರು ದಶಕಗಳ ಹಿಂದಿನ ಸ್ಟಾಂಪ್‌ಗಳಿರಬಹುದು. ಅವುಗಳು ಹಾಳಾಗದಂತೆ ತುಂಬಾ ಜೋಪಾನ ವಾಗಿ ಕಾಪಾಡಿಕೊಂಡು ಬರುವ ಹವ್ಯಾಸಿಗಳಿರುತ್ತಾರೆ. ನಿಜವಾಗಿಯೂ ಇದು ಒಂದು ಒಳ್ಳೆಯ ಅಭ್ಯಾಸ. ಅವುಗಳನ್ನು ನೋಡಿದರೆ ಆ ಕಾಲದಲ್ಲಿ ಇಂತಹ ಸ್ಟಾಂಪ್‌ಗಳು ಇತ್ತಾ ಎಂದು ಆಶ್ಚರ್ಯವಾಗುತ್ತದೆ.

* ತಾಮ್ರದ ನಾಣ್ಯ * ಬೆಳ್ಳಿ ನಾಣ್ಯ * ಹಿತ್ತಾಳೆ ನಾಣ್ಯ

ಆ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ಆಕೃತಿ, ಬೆಲೆ ಎಲ್ಲವನ್ನೂ ತಿಳಿದಾಗ ನಿಜವಾಗಿ ಆಶ್ಚರ್ಯವಾಗುತ್ತದೆ. ಇವುಗಳೆಲ್ಲಾ ನಾವು ಹುಟ್ಟುವ ಎಷ್ಟೋ ವರ್ಷಗಳ ಮೊದಲು ಬಳಕೆಯಲ್ಲಿದ್ದ ನಾಣ್ಯಗಳು.

ಕೆಲವರ ಮನೆಗೆ ಹೋದರೆ ಸಂಗ್ರಹಣಾ ಕೇಂದ್ರ ಒಂದು ಅದ್ಭುತವಾದ ಪ್ರಾಚೀನ ವಸ್ತುಗಳ ಸಂಗ್ರಹಾಲಯದಂತೆ ಕಂಡುಬರುತ್ತದೆ. ಅವುಗಳನ್ನೆಲ್ಲ ಸಂಗ್ರಹಿಸಿ ಜೋಪಾನ ಮಾಡುವುದೇನೂ ಸುಲಭವಾದ ವಿಚಾರವಲ್ಲ. ಇಂತಹ ಒಂದು ಪ್ರಯತ್ನ ನಿಜವಾಗಿ ಪ್ರಶಂಸನೀಯ.

ಇಂದಿನ ಯುವ ಸಮೂಹದಲ್ಲಿ ತುಂಬಾ ಮಂದಿ ಅನಗತ್ಯವಾದ ಹರಟೆ,ತಿರುಗಾಟ ಮತ್ತು ಜಾಲಿಯಾಗುವುದರಲ್ಲಿ ಕಾಲ ಕಳೆಯು ತ್ತಾರೆ. ಚೆಲ್ಲು ಚೆಲ್ಲಾಗಿ ಆಡಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡುವುದರ ಬದಲು ಇಂತಹ ಒಳ್ಳೆ ಯ ಅಭ್ಯಾಸವನ್ನು ಬೆಳೆಸಿಕೊಂಡರೆ ಸಾರ್ಥಕವಾಗುತ್ತದೆ.

ಆದರೆ, ಯುವಕರಲ್ಲಿ ತುಂಬಾ ಕಡಿಮೆ ಮಂದಿ ಪ್ರತಿಶತ ಒಬ್ಬ ಅಥವಾ ಇಬ್ಬರು ಇಂತಹ ಒಂದು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇನ್ನು ಕೆಲವರು ಇದನ್ನು ಸಮಯ ಪಾಲನೆಗಾಗಿ ರೂಢಿಸಿಕೊಂಡಿದವರಿರುತ್ತಾರೆ. ಯಾರಾದರೂ ಮನೆಗೆ ಬಂದರೆ ಎಲ್ಲವನ್ನು ತೋರಿಸಿ ಸಂತೋಷ ಪಡುತ್ತಾರೆ.

ಅವುಗಳನ್ನು ಯಾವ ರೀತಿ ಎಲ್ಲಿಂದ ಯಾವಾಗ ಎಷ್ಟು ಕಷ್ಟ ಪಟ್ಟು ತಂದೆ ಎಂದು ವಿವರಿಸುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಇಂತಹ ಸಂಗ್ರಹವನ್ನು ನೋಡುವ ಅವಕಾಶ ಅನಿರೀಕ್ಷಿತವಾಗಿರುವ ಸಾಧ್ಯತೆಗಳಿರುತ್ತವೆ. ಈ ರೀತಿ ಸಂಗ್ರಹ ಮಾಡಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವವರಿಗೆ ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇರುತ್ತದೆ.

ತಮ್ಮ ಈ ಶ್ರಮ ಸಾರ್ಥಕವಾಗಬೇಕಾದರೆ ಅದನ್ನು ಬೇರೆಯವರು ನೋಡಬೇಕು ಮತ್ತು ಮೆಚ್ಚಿ ಹೊಗಳಿಕೆಯ ಮಾತಾಡಬೇಕು ಎಂಬ ಹಂಬಲ ಮತ್ತು ಒಳ ಆಸೆ ಇರುತ್ತದೆ. ಇದು ತಪ್ಪು ಅಂತ ಅಲ್ಲ. ಆದರೆ ಯಾವುದೂ ಅತಿಯಾಗಬಾರದು. ಒಂದು ಮಿತಿಯಲ್ಲಿರಬೇಕು ಮತ್ತು ಮನೆಗೆ ಬಂದ ಅತಿಥಿಗಳ ಸ್ವಭಾವ, ಆಸಕ್ತಿ ಗಮನಿಸಿ ನಂತರ ಹಿತಮಿತವಾಗಿ ಅದರ ಬಗ್ಗೆ ತಿಳಿಸಬೇಕು.

ಪ್ರಾಚೀನ ವಸ್ತು ಯಾವುದೇ ಆಗಿದ್ದರೂ ಸಹ ಅವು ಸಂಗ್ರಹ ಯೋಗ್ಯವಾಗಿರುತ್ತದೆ. ಆದ್ದರಿಂದ ನಮಗೆ ಗೊತ್ತಿಲ್ಲದ ಆ ಕಾಲದ ವಿಚಾರದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಅವುಗಳನ್ನು ಕಾಪಾಡಬೇಕು. ಒಂದು ವೇಳೆ ನಿರಂತರವಾಗಿ ನಮ್ಮಿಂದ ಕಾಪಾಡಲು ಆಗದಿದ್ದರೆ ಅವುಗಳನ್ನು ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ಕೊಡಬೇಕು. ಕೆಲವರ ಮನೆಯಲ್ಲಿ ರೇಡಿಯೋಗಳನ್ನು ಇಟ್ಟಿರುತ್ತಾರೆ.

ಅಂದರೆ ಶತಮಾನಗಳ ಹಿಂದಿನ ರೇಡಿಯೋ ಯಾವ ರೀತಿ ಇತ್ತು ಎಂಬುವುದನ್ನು ಕಂಡಾಗ ಒಂದು ರೀತಿ ಪುಳಕ ಉಂಟಾಗುತ್ತದೆ.ಅದೇ ರೀತಿ ಗ್ರಾಮೋಫೋನ್‌ಗಳು, ದೊಡ್ಡ ಗಡಿಯಾರಗಳು, ಆ ಕಾಲದ ಫ್ಲವರ್ ವಾಝ್‌ಗಳು ಇತ್ಯಾದಿಗಳು.

ಇದರಿಂದ ಒಂದು ವರ್ಗದ ಜನಗಳ ಹವ್ಯಾಸ ಯಾವ ರೀತಿ ಇರುತ್ತದೆ ಎಂದು ತಿಳಿಯುತ್ತದೆ. ಆದರೆ, ವಿಚಿತ್ರ ಅಭಿಲಾಷೆ, ಆಸೆ ಮತ್ತು ಹಂಬಲದ ಇನ್ನು ಕೆಲವರಿರುತ್ತಾರೆ. ಅವರು ಸಂಗ್ರಹಿಸುವ ವಸ್ತುಗಳು ತುಂಬಾ ವಿಚಿತ್ರವಾಗಿರುತ್ತವೆ ಮತ್ತು ಅವರಿಗೆ ಅವುಗಳ ಅಗತ್ಯವಿರುವುದೇ ಎಂದು ಅನಿಸುತ್ತದೆ.

ಆ ವಸ್ತುಗಳ ಸಂಗ್ರಹ ನೋಡಿದಾಗ ಇಂತಹಾ ಒಂದು ಹಂಬಲ ಸಾಮಾನ್ಯರಲ್ಲಿ ಮಾತ್ರ ಅಲ್ಲ, ಬಹುತೇಕ ಶ್ರಿಮಂತರು ಮತ್ತು ಖ್ಯಾತಿ ಪಡೆದಿರುವ ದೊಡ್ಡ ವ್ಯಕ್ತಿಗಳಲ್ಲಿ ಸಹ ಇರುತ್ತದೆ. ಅಲ್ಲದೆ ವಿಶ್ವದಲ್ಲಿ ಇಂತಹ ಅನೇಕರು ಸಂಗ್ರಹಕರಿದ್ದಾರೆ.

ಅಂತಹವರಲ್ಲಿ ಪ್ರಮುಖರೆಂದರೆ:
*ಬ್ಯಾಡ್‌ಮನ್
*ಹಿಲೆರಿ ತಾಜ್(ಉದ್ಯಮಿ)
*ಫ್ಲವರ್ಟ್ ಜಾಂಗ್
*ತಲವೇರಿ
*ವಿಲಿಯಮ್ ಹಾಗ್
*ಫ್ರಾಂಕ್ಲಿನ್‌ಕೀಟ್ಸ್
*ಹೆನ್ರಿ ಡಾಕ್(ಉದ್ಯಮಿ)
*ಕ್ಲೆವೆಂಡರ್(ಈಸ್ಟ್ ಫ್ರಾನ್ಸ್‌ನ ಅಧ್ಯಕ್ಷ)
*ಮಾರ್ಟಿನ್ ಷಾ(ನಟ)
*ಬ್ಲಂಡರಿನ್ ಲಾರ್ಟ್
*ರಾಬರ್ಟ್ ಹೇಲಿಯನ್
*ಬಾರ್ಬಿಲಿನ್ ಲಿಂಡರ್

ಹೀಗೆ ಹತ್ತು ಹಲವಾರು ಮಂದಿ ವಿವಿಧ ರೀತಿಯಾದಂತಹ ಹವ್ಯಾಸಗಳನ್ನು ಹೊಂದಿರುತ್ತಾರೆ ಎಂಬುದಕ್ಕೆ ಇವರೇ ಸಾಕ್ಷಿ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ