mail-img print-img

ಕಟ್ಟಾ ಮೀಠಾ: ಸಿಹಿಗಿಂತ ಕಹಿಯೇ ಅಧಿಕ

ಶನಿವಾರ - ಆಗಸ್ಟ್ -28-2010

ಕಾಲಾಪಾನಿ, ಕಾಂಜೀವರಂನಂತಹ ಹೃದಯಸ್ಪರ್ಶಿ ಚಿತ್ರಗಳನ್ನು ನೀಡಿದ ಪ್ರಿಯದರ್ಶನ್ ಎನ್ನುವ ಮಾಂತ್ರಿಕ ತನ್ನ ಮಂತ್ರದಂಡವನ್ನು ಕಳೆದು ಕೊಂಡಿದ್ದಾರೆಯೆ? ಸದಭಿರುಚಿಯ ಚಿತ್ರಗಳ ನಿರೀಕ್ಷೆಯಲ್ಲಿರುವ ಪ್ರಿಯದರ್ಶನ್‌ನ ಎಲ್ಲ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಬಾಲಿವುಡ್‌ನ ಅವಸರಕ್ಕನುಗುಣವಾಗಿ ರಿಮೇಕ್ ಚಿತ್ರಗಳನ್ನು ಮಾಡಿ ಮಾಡಿ ಎಸೆಯುತ್ತಿದ್ದಾರೆ ಪ್ರಿಯದರ್ಶನ್.

ಸದಾ ತನ್ನ ಒಂದು ಕೈಯನ್ನು ಮಲಯಾಳಂನ ಕಾಮಿಡಿ ಚಿತ್ರಗಳನ್ನು ಕದಿಯುವು ದಕ್ಕಾಗಿಯೇ ಅಡವಿಟ್ಟಿರುವ ಇವರು, ಬಾಲಿವುಡ್ ನಲ್ಲಿ ಗಂಟೆಗೊಂದು ಚಿತ್ರವನ್ನು ಮಾಡಿ ಎಸೆಯಬಲ್ಲ ಕುಖ್ಯಾತಿಯನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ಇರಾನಿಯನ್ ಚಿತ್ರ ‘ಚಿಲ್ಡ್ರನ್ಸ್ ಆಫ್ ಹೆವೆನ್’ನ್ನು ಹಿಂದಿಯಲ್ಲಿ ಮಾಡಲು ಹೋಗಿ ಪ್ರೇಕ್ಷಕರಿಗೆ ನರಕ ತೋರಿಸಿದ ಹೆಮ್ಮೆ ಇವರದು.

ಇದೀಗ ಕೆಲವೇ ದಿನಗಳಲ್ಲಿ ಮತ್ತೊಂದು ರಿಮೇಕ್ ಚಿತ್ರ ‘ಕಟ್ಟಾ ಮೀಠಾ’ ಮಾಡಿ ಪ್ರೇಕ್ಷಕರಿಗೆ ಬಡಿಸಿದ್ದಾರೆ. ಎಂದಿನಂತೆಯೇ ಮಲಯಾಳಂನ ಹಳೆಯ ಚಿತ್ರವೊಂದರ ಕತೆಯನ್ನು ಬಾಲಿವುಡ್‌ಗೆ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಭಟ್ಟಿ ಇಳಿಸಿದ್ದಾರೆ. ಚಿತ್ರದಲ್ಲಿ ಮೀಠಾಕ್ಕಿಂತ ಜಾಸ್ತಿ ಕಹಿಯೇ ಅಧಿಕ ಇರುವುದರಿಂದ ಪ್ರೇಕ್ಷಕನನ್ನು ಮತ್ತೆ ಪ್ರಿಯದರ್ಶನ್ ನಿರಾಶೆಗೀಡು ಮಾಡುತ್ತಾರೆ.

ನಿರ್ದೇಶಕನಾಗಿ ಪ್ರಿಯದರ್ಶನ್‌ನ ಸಾಮರ್ಥ್ಯದ ಕುರಿತಂತೆ ಯಾರಿಗೂ ಅನುಮಾನವಿಲ್ಲ. ಆದರೆ ಅವರಿಗೆ ತಮಿಳು, ಮಲಯಾಳಂ ಭಾಷೆಯಂತೆ ಹಿಂದಿ ಭಾಷೆ ಒಗ್ಗುತ್ತಿಲ್ಲ. ವಾಸ್ತವಕ್ಕೆ ಹೆಚ್ಚು ಹತ್ತಿರವಿರುವ ಮಲಯಾಳಂ ಚಿತ್ರಗಳಿಗೆ ಬಾಲಿವುಡ್‌ನ ಗ್ಲಾಮರ್‌ಗಳನ್ನು ತುಂಬಿ ಹೊಸದಾಗಿ ಕೊಡುವ ಅವರ ಪ್ರಯತ್ನ ವಿಫಲವಾಗುತ್ತಿರುವುದು ಇದೇ ಕಾರಣಕ್ಕೆ. ಮಲಯಾಳಂ ಚಿತ್ರವನ್ನು ಆಧರಿಸಿ ತೆಗೆದ ಕೆಲವು ಹಿಂದಿ ಚಿತ್ರಗಳು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆಯಾದರೂ, ಆ ಚಿತ್ರದ ಮೂಲದಲ್ಲಿರುವ ಹಾಸ್ಯವೇ ಅದಕ್ಕೆ ಕಾರಣ. ಆದರೆ ಇತ್ತೀಚೆಗೆ ಹಾಸ್ಯವನ್ನು ನಿರೂಪಿಸುವಲ್ಲ್ಲೂ ಪ್ರಿಯದರ್ಶನ್ ಸೋಲುತ್ತಿದ್ದಾರೆ. ಅದಕ್ಕೆ ಇನ್ನೊಂದು ಉದಾಹರಣೆ ಕಟ್ಟಾ ಮೀಠಾ.

ಚಿತ್ರ ಒಬ್ಬ ಕಾಂಟ್ರಕ್ಟರ್ ಸಚಿನ್ (ಅಕ್ಷಯ್‌ಕುಮಾರ್)ನ ಸುತ್ತ ತಿರುಗುತ್ತದೆ. ಮನೆಯಲ್ಲಿ ಯಾರಿಗೂ ಬೇಡದವನಾದ, ಭ್ರಷ್ಟ ಎಂಬ ಹಣೆಪಟ್ಟಿ ಯನ್ನು ಧರಿಸಿಕೊಂಡ ಈತನ ಒದ್ದಾಟ, ಜಂಜಡಗಳನ್ನು ಹಾಸ್ಯಮಯವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ ಪ್ರಿಯದರ್ಶನ್. ಆರಂಭದಲ್ಲಿ ಚಿತ್ರ ನಿಧಾನವಾಗಿ ಚಲಿಸುತ್ತದೆ. ಈತನ ಅಣ್ಣಂದಿರ, ಬಾವಂದಿರ ಮೋಸ, ಭ್ರಷ್ಟನಾದರೂ ಈತನಲ್ಲಿರುವ ಒಳ್ಳೆಯತನ ಇವನ್ನೆಲ್ಲ ಚಿತ್ರದ ಆರಂಭ ತೆರೆದಿಡುತ್ತದೆ.

ಇದೇ ಸಂದರ್ಭದಲ್ಲಿ ನಗರ ಪಾಲಿಕೆಗೆ ಹೊಸದಾಗಿ ಆಗಮಿಸುವ ಅಧಿಕಾರಿ(ತೃಷಾ)ಯ ಜೊತೆಗೆ ಕಥಾನಾಯಕನ ಸಂಘರ್ಷ. ಇಲ್ಲೂ ಒಂದು ಉಪಕಥೆೆಯಿದೆ. ಈ ಅಧಿಕಾರಿಣಿ ಕಾಲೇಜು ಕಾಲದಲ್ಲಿ ಸಚಿನ್‌ನ ಪ್ರೇಯಸಿ ಯಾಗಿರುತ್ತಾಳೆ. ಘಟನೆಯೊಂದು ಅವರನ್ನು ಬೇರೆ ಬೇರೆ ಮಾಡುತ್ತದೆ. ಮಧ್ಯಾಂತರದ ಬಳಿಕ, ಜಾನಿಲಿವರ್ ಪ್ರವೇಶದಿಂದ ಚಿತ್ರ ಒಂದಿಷ್ಟು ಖುಷಿಕೊಡುತ್ತದೆ. ಇನ್ನೇನು ಚಿತ್ರ ತನ್ನ ಲವಲವಿಕೆಯಿಂದ ಜೀವ ಪಡೆಯಿತು ಎನ್ನುವಷ್ಟರಲ್ಲಿ ಖಳನಾಯಕರನ್ನು ಕಥಾನಾಯಕ ಸದೆ ಬಡಿಯುವುದರೊಂದಿಗೆ ಮುಕ್ತಾಯವಾಗುತ್ತದೆ.

ಅಕ್ಷಯ್ ಅಭಿನಯ ಪರವಾಗಿಲ್ಲ. ರಾಜ್‌ಪಾಲ್ ಯಾದವ್ ಮತ್ತು ಜಾನಿಲಿವರ್ ಪಾತ್ರಗಳಿಂದ ಚಿತ್ರ ಒಂದಿಷ್ಟು ಸಹ್ಯವಾಗಿದೆ. ಚಿತ್ರವನ್ನು ಸಂಪೂರ್ಣ ಹಾಸ್ಯ ಚಿತ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರಕತೆಯನ್ನು ಇನ್ನೊಂದಿಷ್ಟು ತಿದ್ದಿ ತೀಡಿದ್ದರೆ ಕನಿಷ್ಠ ಒಂದು ಒಳ್ಳೆಯ ಹಾಸ್ಯ ಚಿತ್ರವನ್ನು ಕೊಟ್ಟ ಹೆಗ್ಗಳಿಕೆ ನಿರ್ದೇಶಕರದ್ದಾಗುತ್ತಿತ್ತು. ಆದರೆ ಪ್ರಿಯದರ್ಶನ್ ಅವರ ಅವಸರ ಎದ್ದು ಕಾಣುತ್ತದೆ. ಹೀಗೆ ಚಿತ್ರ ನಿರ್ದೇಶಿಸುತ್ತಾ ಹೋದರೆ, ‘ರಿಮೇಕ್ ರಾಜ’ ಎಂಬ ಕಳಂಕವನ್ನು ಅವರು ಶಾಶ್ವತವಾಗಿ ಹೊರಬೇಕಾಗುತ್ತದೆ. ಪ್ರಿಯದರ್ಶನ್ ತಮ್ಮ ಕದಿಯುವ ಚಟದಿಂದ ಹೊರ ಬರಲಿ. ಅಪರೂಪಕ್ಕೊಂದು ಚಿತ್ರವನ್ನು ಕೊಟ್ಚರೂ ಪರವಾಗಿಲ್ಲ. ಅದರಲ್ಲಿ ಅವರ ಸ್ವಂತಿಕೆಯಿರಲಿ. ಕಾಲಾಪಾನಿ, ಕಾಂಜೀವರಂನಂತಹ ಇನ್ನೊಂದು ಚಿತ್ರಕ್ಕಾಗಿ ಅವರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎನ್ನುವುದು ಅವರಿಗೆ ನೆನಪಿರಲಿ.

-ಮುಸಾಫಿರ್‌

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ