ಮನಾಮ: ಗಲ್ಫ್ ಪ್ರಾಂತ್ಯದಲ್ಲಿ ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿರುವ ವಾಯುಯಾನ ಸಂಸ್ಥೆಗಳಲ್ಲೊಂದಾದ ಕತರ್ ಏರ್ವೇಸ್, 501 ಮಿಲಿಯ ಡಾಲರ್ ವೌಲ್ಯದ ದೀರ್ಘ ವ್ಯಾಪ್ತಿಯ ಎರಡು ಬೋಯಿಂಗ್ 777-200 ವಿಮಾನಗಳ ಖರೀದಿಗಾಗಿ ಆರ್ಡರ್ ಸಲ್ಲಿಸಿದೆ. ಇದಕ್ಕಿಂತಲೂ ಮುನ್ನ ಆರ್ಡರ್ ಸಲ್ಲಿಸಲಾದ ಬೋಯಿಂಗ್ 787 ಡ್ರೀಮ್ಲೈನರ್ ಮಾದರಿಯ ವಿಮಾನಗಳು 2011ನೆ ಇಸವಿಯ ಪ್ರಥಮ ತ್ರೈಮಾಸಿಕದಲ್ಲಿ ತನ್ನ ಬಳಗಕ್ಕೆ ಸೇರ್ಪಡೆಗೊಳ್ಳಲಿದೆಯೆಂದು ಕತರ್ ಏರ್ವೇಸ್ ಪ್ರಕಟಿಸಿದೆ.
![]() |
‘‘ಮಧ್ಯಪ್ರಾಚ್ಯದಲ್ಲಿ ವಾಯುಯಾನಕ್ಕಾಗಿನ ಬೇಡಿಕೆಯು ಬೆಳೆಯುತ್ತಲೇ ಹೋಗುತ್ತಿದೆ. ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನದ ಬೇಡಿಕೆಯು ಹೆಚ್ಚುತ್ತಿದೆ ಎಂದು ಕತರ್ ಏರ್ವೇಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಬರ್ ಅಲ್ ಬಕರ್ ತಿಳಿಸಿದ್ದಾರೆ. ಕತರ್ ಏರ್ವೇಸ್ ಬಳಿ ಪ್ರಸ್ತುತ 17 ಬೋಯಿಂಗ್ 777 ವಿಮಾನಗಳಿವೆ. ಇವುಗಳಲ್ಲಿ 11 ವಿಸ್ತೃತ ವ್ಯಾಪ್ತಿ, ಆರು ದೀರ್ಘ ವ್ಯಾಪ್ತಿ ಮತ್ತು ಎರಡು ಸಾಗಾಟ ವಿಮಾನಗಳಾಗಿವೆ. ಈಗ ಇನ್ನೂ ಎರಡು ಹೊಸ ವಿಮಾನಗಳನ್ನು ಖರೀದಿಸುವ ಘೋಷಣೆಯೊಂದಿಗೆ ಕತರ್ ಏರ್ವೇಸ್ 10 ಬೋಯಿಂಗ್ -777 ವಿಮಾನಗಳಿಗೆ ಆರ್ಡರ್ ನೀಡಿದಂತಾಗಿದೆ.
ಹೆಚ್ಚುವರಿಯಾಗಿ ಎರಡು ಬೋಯಿಂಗ್ -777 ವಿಮಾನಗಳ ಖರೀದಿಯಿಂದ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ನೂತನ ಅವಕಾಶಗಳನ್ನು ಗುರುತಿಸಲು ಸಾಧ್ಯವಾಗಲಿದೆಯೆಂದು ಅಲ್ ಬಕರ್ ಹೇಳಿದ್ದಾರೆ. ಕತರ್ ಏರ್ವೇಸ್ನ 777-200 ಬೋಯಿಂಗ್ ವಿಮಾನಗಳ ಮೂರು ಜೋಡಿಯು ದೋಹಾ ಹಾಗೂ ಹೌಸ್ಟನ್ ಮತ್ತು ಮೆಲ್ಬೋರ್ನ್ ಮತ್ತು ಸಾವೊ ಪೌಲೊ, ಬ್ಯೂನಸ್ ಐರಿಸ್ ನಡುವೆ ನಿರಂತರವಾಗಿ ಹಾರಾಡುತ್ತಿವೆ.
ದೋಹಾದಿಂದ ಜಗತ್ತಿನ ಯಾವುದೇ ಪ್ರಮುಖ ನಗರದ ಜೊತೆ ನಿರಂತರವಾಗಿ ಸಂಪರ್ಕಿಸುವ ಹಾಗೂ ವಿಶ್ವದಲ್ಲೇ ಅತ್ಯಂತ
![]() |
ದೀರ್ಘ ವ್ಯಾಪ್ತಿಯ ಪ್ರಯಾಣವನ್ನು ನಡೆಸುವ ವಾಣಿಜ್ಯ ವಿಮಾನಯಾನ ಸಂಸ್ಥೆಯೆಂಬ ಖ್ಯಾತಿ ಕತಾರ್ ಏರ್ವೇಸ್ಗಿದೆ. 2007ರಲ್ಲಿ ಮೊದಲ ಬಾರಿಗೆ ಕತರ್ ಏರ್ವೇಸ್ ಬೋಯಿಂಗ್ 777 ಪ್ರಯಾಣಿಕ ವಿಮಾನದ ಹಾರಾಟವನ್ನು ಆರಂಭಿಸಿತು. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಬೋಯಿಂಗ್ 777 ಸರಕು ಸಾಗಾಟ ವಿಮಾನದ ಹಾರಾಟವನ್ನು ಅದು ಪ್ರಾರಂಭಿಸಿತ್ತು.ಕತರ್ ಏರ್ವೇಸ್ ಬಳಿ ಪ್ರಸ್ತುತ 17 ಬೋಯಿಂಗ್ -777 ವಿಮಾನಗಳಿವೆ. ಇವುಗಳಲ್ಲಿ 11 ವಿಸ್ತೃತ ವ್ಯಾಪ್ತಿ, ಆರು ದೀರ್ಘ ವ್ಯಾಪ್ತಿ ಮತ್ತು ಎರಡು ಸಾಗಾಟ ವಿಮಾನಗಳಾಗಿವೆ. ಈಗ ಇನ್ನೂ ಎರಡು ಹೊಸ ವಿಮಾನಗಳನ್ನು ಖರೀದಿಸುವ ಘೋಷಣೆಯೊಂದಿಗೆ ಕತರ್ ಏರ್ವೇಸ್ 10 ಬೋಯಿಂಗ್- 777 ವಿಮಾನಗಳಿಗೆ ಆರ್ಡರ್ ನೀಡಿದಂತಾಗಿದೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...