mail-img print-img

ಯಶಸ್ಸಿನ ಉತ್ತುಂಗದಲ್ಲಿ: ಕತರ್ ಏರ್‌ವೇಸ್

ಸೋಮವಾರ - ಆಗಸ್ಟ್ -16-2010

ಮನಾಮ: ಗಲ್ಫ್ ಪ್ರಾಂತ್ಯದಲ್ಲಿ ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿರುವ ವಾಯುಯಾನ ಸಂಸ್ಥೆಗಳಲ್ಲೊಂದಾದ ಕತರ್ ಏರ್‌ವೇಸ್, 501 ಮಿಲಿಯ ಡಾಲರ್ ವೌಲ್ಯದ ದೀರ್ಘ ವ್ಯಾಪ್ತಿಯ ಎರಡು ಬೋಯಿಂಗ್ 777-200 ವಿಮಾನಗಳ ಖರೀದಿಗಾಗಿ ಆರ್ಡರ್ ಸಲ್ಲಿಸಿದೆ. ಇದಕ್ಕಿಂತಲೂ ಮುನ್ನ ಆರ್ಡರ್ ಸಲ್ಲಿಸಲಾದ ಬೋಯಿಂಗ್ 787 ಡ್ರೀಮ್‌ಲೈನರ್ ಮಾದರಿಯ ವಿಮಾನಗಳು 2011ನೆ ಇಸವಿಯ ಪ್ರಥಮ ತ್ರೈಮಾಸಿಕದಲ್ಲಿ ತನ್ನ ಬಳಗಕ್ಕೆ ಸೇರ್ಪಡೆಗೊಳ್ಳಲಿದೆಯೆಂದು ಕತರ್ ಏರ್‌ವೇಸ್ ಪ್ರಕಟಿಸಿದೆ.

‘‘ಮಧ್ಯಪ್ರಾಚ್ಯದಲ್ಲಿ ವಾಯುಯಾನಕ್ಕಾಗಿನ ಬೇಡಿಕೆಯು ಬೆಳೆಯುತ್ತಲೇ ಹೋಗುತ್ತಿದೆ. ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನದ ಬೇಡಿಕೆಯು ಹೆಚ್ಚುತ್ತಿದೆ ಎಂದು ಕತರ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಬರ್ ಅಲ್ ಬಕರ್ ತಿಳಿಸಿದ್ದಾರೆ. ಕತರ್ ಏರ್‌ವೇಸ್ ಬಳಿ ಪ್ರಸ್ತುತ 17 ಬೋಯಿಂಗ್ 777 ವಿಮಾನಗಳಿವೆ. ಇವುಗಳಲ್ಲಿ 11 ವಿಸ್ತೃತ ವ್ಯಾಪ್ತಿ, ಆರು ದೀರ್ಘ ವ್ಯಾಪ್ತಿ ಮತ್ತು ಎರಡು ಸಾಗಾಟ ವಿಮಾನಗಳಾಗಿವೆ. ಈಗ ಇನ್ನೂ ಎರಡು ಹೊಸ ವಿಮಾನಗಳನ್ನು ಖರೀದಿಸುವ ಘೋಷಣೆಯೊಂದಿಗೆ ಕತರ್ ಏರ್‌ವೇಸ್ 10 ಬೋಯಿಂಗ್ -777 ವಿಮಾನಗಳಿಗೆ ಆರ್ಡರ್ ನೀಡಿದಂತಾಗಿದೆ.

   
   

ಹೆಚ್ಚುವರಿಯಾಗಿ ಎರಡು ಬೋಯಿಂಗ್ -777 ವಿಮಾನಗಳ ಖರೀದಿಯಿಂದ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ನೂತನ ಅವಕಾಶಗಳನ್ನು ಗುರುತಿಸಲು ಸಾಧ್ಯವಾಗಲಿದೆಯೆಂದು ಅಲ್ ಬಕರ್ ಹೇಳಿದ್ದಾರೆ. ಕತರ್ ಏರ್‌ವೇಸ್‌ನ 777-200 ಬೋಯಿಂಗ್ ವಿಮಾನಗಳ ಮೂರು ಜೋಡಿಯು ದೋಹಾ ಹಾಗೂ ಹೌಸ್ಟನ್ ಮತ್ತು ಮೆಲ್ಬೋರ್ನ್ ಮತ್ತು ಸಾವೊ ಪೌಲೊ, ಬ್ಯೂನಸ್ ಐರಿಸ್ ನಡುವೆ ನಿರಂತರವಾಗಿ ಹಾರಾಡುತ್ತಿವೆ.

ದೋಹಾದಿಂದ ಜಗತ್ತಿನ ಯಾವುದೇ ಪ್ರಮುಖ ನಗರದ ಜೊತೆ ನಿರಂತರವಾಗಿ ಸಂಪರ್ಕಿಸುವ ಹಾಗೂ ವಿಶ್ವದಲ್ಲೇ ಅತ್ಯಂತ

ದೀರ್ಘ ವ್ಯಾಪ್ತಿಯ ಪ್ರಯಾಣವನ್ನು ನಡೆಸುವ ವಾಣಿಜ್ಯ ವಿಮಾನಯಾನ ಸಂಸ್ಥೆಯೆಂಬ ಖ್ಯಾತಿ ಕತಾರ್ ಏರ್‌ವೇಸ್‌ಗಿದೆ. 2007ರಲ್ಲಿ ಮೊದಲ ಬಾರಿಗೆ ಕತರ್ ಏರ್‌ವೇಸ್ ಬೋಯಿಂಗ್ 777 ಪ್ರಯಾಣಿಕ ವಿಮಾನದ ಹಾರಾಟವನ್ನು ಆರಂಭಿಸಿತು. ಕೇವಲ ಎರಡು ತಿಂಗಳ ಹಿಂದೆಯಷ್ಟೇ ಬೋಯಿಂಗ್ 777 ಸರಕು ಸಾಗಾಟ ವಿಮಾನದ ಹಾರಾಟವನ್ನು ಅದು ಪ್ರಾರಂಭಿಸಿತ್ತು.ಕತರ್ ಏರ್‌ವೇಸ್ ಬಳಿ ಪ್ರಸ್ತುತ 17 ಬೋಯಿಂಗ್ -777 ವಿಮಾನಗಳಿವೆ. ಇವುಗಳಲ್ಲಿ 11 ವಿಸ್ತೃತ ವ್ಯಾಪ್ತಿ, ಆರು ದೀರ್ಘ ವ್ಯಾಪ್ತಿ ಮತ್ತು ಎರಡು ಸಾಗಾಟ ವಿಮಾನಗಳಾಗಿವೆ. ಈಗ ಇನ್ನೂ ಎರಡು ಹೊಸ ವಿಮಾನಗಳನ್ನು ಖರೀದಿಸುವ ಘೋಷಣೆಯೊಂದಿಗೆ ಕತರ್ ಏರ್‌ವೇಸ್ 10 ಬೋಯಿಂಗ್- 777 ವಿಮಾನಗಳಿಗೆ ಆರ್ಡರ್ ನೀಡಿದಂತಾಗಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್