ದುಬೈ, ಜ.17: ಅರಬ್ ಸಂಯುಕ್ತ ಸಂಸ್ಥಾನದ ಬ್ಯಾರಿ ಸಾಂಸ್ಕೃತಿಕ ವೇದಿಕೆ (ಬಿಸಿಎಫ್) ವತಿಯಿಂದ ವಾರ್ಷಿಕ ಕ್ರೀಡಾ ಕೂಟ 2012 ದುಬೈನ ಶಾರ್ಜಾ ವಾಂಡರರ್ಸ್ ಕ್ಲಬ್ನಲ್ಲಿ ಇತ್ತೀಚೆಗೆ ಜರಗಿತು.
ಯುಎಇನ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಬ್ಯಾರಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳಗಿನ ಹೊತ್ತಲ್ಲಿ ವಾಲಿಬಾಲ್ ಟೂರ್ನಮೆಂಟ್ ಹಾಗೂ ಮಹಿಳೆಯ ರಿಗಾಗಿ ಪಾಕ ಸ್ಪರ್ಧೆಯನ್ನು ಆಯೋಜಿಸ ಲಾಗಿತ್ತು. ಆನಂತರ ವಿವಿಧ ರೀತಿಯ ಕ್ರೀಡಾ ಕೂಟಗಳು ನಡೆದವು.
ಕ್ರೀಡಾ ಕೂಟದಲ್ಲಿ ಯುವಕರಿಂದ ಹಿಡಿದು ಮುದುಕರವರೆಗಿನ ಸ್ಪರ್ಧಾಳು ಗಳು ಅತ್ಯಂತ ಲವಲವಿಕೆಯಿಂದ ಭಾಗವಹಿಸಿದ್ದರು.
ಸುಪ್ರಿಂ ವಾಟರ್ ಪ್ರೂಫಿಂಗ್, ಯುಎಇ ಎಕ್ಸ್ಚೇಂಜ್, ಶಮೀಮ್ ಇಂಜಿನಿಯರಿಂಗ್, ತುಫೈಲ್ ಗ್ರೂಫ್, ಮಿಲಾನೋ ಓಪ್ಟಿಕ್ಸ್, ಒನಿಕ್ಸ್ ಅ್ಯಡ್ವರ್ಟೈಸಿಂಗ್, ಬಿನ್ ಶಾಕೀರ್ ಎಲೆಕ್ಟ್ರಿಕ್ಸ್ ಆ್ಯಂಡ್ ಬಿಲ್ಡಿಂಗ್, ಚಿಲ್ಲಿವಿಲ್ಲಿ, ಅಯಾಸ್ ಈಕ್ವಿಪ್ಮೆಂಟ್ ರೆಂಟಲ್, ಎನ್ಟಿಡಿಇ, ಡಾ.ಬಿಕೆ.ಯೂಸುಫ್, ಎಂಇ. ಮೂಳೂರು, ರಝಾಕ್ ದೇವ, ಲತೀಫ್ ಮೂಲ್ಕಿ, ಡಾ.ಕೌಪ್ ಮುಹಮ್ಮದ್, ಅಲ್ತಾಫ್ ಮತ್ತು ಬಿಸಿಎಫ್ ಆಡಳಿತ ಸಮಿತಿಯ ಸದಸ್ಯರು ಹಾಗೂ ಇತರ ಸದಸ್ಯರು ಕ್ರೀಡಾ ಕೂಟದ ಪ್ರಾಯೋಜಕರಾಗಿದ್ದರು.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ ಯೂಸುಫ್ ಬ್ಯಾರಿ ಜನಾಂಗದ ಅಭಿವೃದ್ಧಿಗೋಸ್ಕರ ದುಡಿದ ಎಲ್ಲಾ ಸದಸ್ಯರು ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕ್ರೆಡಾ ಕೂಟಗಳು ಪರಸ್ಪರರಲ್ಲಿ ಆತ್ಮೀಯ ವಾತಾವರಣ ನಿರ್ಮಿಸಲು ಹಾಗೂ ಜಗತ್ತಿನಾದ್ಯಂತ ಇರುವ ಪ್ರತಿಭಾನ್ವಿತರ ಗುರುತಿಸುವಿಕೆಗೆ ಸಹಾಯಕ ವಾಗುವುದು ಎಂದರು.
ಡಾ.ಕೌಫ್ ವಿಜೇತರ ಹೆಸರನ್ನು ಪ್ರಕಟಿಸಿದರು. ಎಂ.ಇ ಮೂಳೂರು ಧನ್ಯವಾದ ಸಮರ್ಪಿಸಿದರು.
ಕ್ರೀಡಾ ಕೂಟದ ಕೊನೆಗೆ ಲಾಟರಿ ಎತ್ತುವ ಕಾರ್ಯಕ್ರಮವನ್ನು ಡಾ.ಬಿ.ಕೆ. ಯೂಸುಫ್ ಮತ್ತು ಸಿದ್ದೀಕ್ ಬ್ಯಾರಿ ನೆರವೇರಿಸಿದರು.



ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್ತೆಂಡೂಲ್ಕರ್ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...