ಹೊಸದಿಲ್ಲಿಯಲ್ಲಿ ಅಕ್ಟೋಬರ್ 3ರಿಂದ 14ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ಒಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಮತ್ತು ಹಾಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅಖಿಲ್ ಕುಮಾರ್ ನೇತೃತ್ವದ ಭಾರತೀಯ ಬಾಕ್ಸಿಂಗ್ ತಂಡ ಪ್ರಕಟಗೊಂಡಿದೆ. ಈ ಮೂಲಕ ಕಾಮನ್ವೆಲ್ತ್ನಲ್ಲಿ ಭಾರತೀಯ ಬಾಕ್ಸಿಂಗ್ ತಂಡ ಹತ್ತು ಪ್ರಬಲ ಸ್ಪರ್ಧಾಳುಗಳ ಮೂಲಕ ಇತರ ದೇಶದ ಆಟಗಾರರಿಗೆ ಪ್ರಬಲ ಹೋರಾಟ ನೀಡುವ ಯೋಚನೆ ಭಾರತೀಯ ಬಾಕ್ಸಿಂಗ್ ಫೇಡರೇಶನ್ನದ್ದು. ವಿಜೇಂದರ್ , ಅಖಿಲ್ ಕುಮಾರ್ ಮೇಲೆ ಹೇಗೆ ಭರವಸೆ ಇಡಲಾಗಿದೆಯೋ ಅದೇ ರೀತಿ ಇತರ ಆಟಗಾರರ ಮೇಲೆ ಬಾಕ್ಸಿಂಗ್ ಫೆಡರೇಶನ್ ಭರವಸೆ ಇಟ್ಟಿದೆ. 24 ವರ್ಷದ ವಿಜೇಂದರ್ ಭಾರತದ ಪ್ರಥಮ ಒಲಿಂಪಿಕ್ ಪಟುವಾಗಿದ್ದಾರೆ.
ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ತಂಡದಲ್ಲಿ ಆಯ್ಕೆಗೊಂಡಿರುವ ವಿಜೇಂದರ್, ಚೀನಾದ ಗುವಾಂಗ್ಝುವಾದಲ್ಲಿ ನವೆಂಬರ್ 12ರಿಂದ 27ರವರೆಗೆ ನಡೆಯಲಿರುವ ಏಶಿಯನ್ ಗೇಮ್ಸ್ಗೆ ಕೂಡಾ ಆಯ್ಕೆಯಾಗಿದ್ದಾರೆ. ನಾನು ಕಳೆದ ವರ್ಷದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೆ. ಹಾಗೆಯೇ ಕಳೆದ ವರ್ಷದ ಏಶಿಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದೆ. ಆದರೆ ಈ ವರ್ಷದ ಈ ಎರಡು ಪಂದ್ಯಾವಳಿಗಳಲ್ಲಿ ಚಿನ್ನ ಪಡೆಯುವ ಗುರಿ ನನ್ನದು ಎಂದು ವಿಜೇಂದರ್ ಹೇಳಿದ್ದಾರೆ.ಏಶಿಯನ್ ಗೇಮ್ಸ್ಗಾಗಿ ದಕ್ಷಿಣ ಏಶಿಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಹಾಲಿ ರಾಷ್ಟ್ರೀಯ ಚಾಂಪಿಯನ್ ಚೊಟೆ ಲಾಲ್ ಯಾದವ್ರ ಸ್ಥಾನಕ್ಕೆ ಆಯ್ಕೆಗೊಂಡಿರುವ 28 ವರ್ಷದ ಅಖಿಲ್ ಕುಮಾರ್ ಮೇಲೆ ಭರವಸೆಯಿದೆ.
ಏಶಿಯನ್ ಗೇಮ್ಸ್ನಲ್ಲಿ ಚೋಟೆ ಲಾಲ್, ವಿ.ಸಂತೋಷ್, ಮನೋಜ್ಕುಮಾರ್, ವಿಕಾಸ್ ಕೃಷ್ಣನ್ ಮತ್ತು ಜೈ ಭಗವಾನ್ ಉತ್ತಮ ಪ್ರದರ್ಶನ ನೀಡುತ್ತಾರೆಂದು ಭಾವಿಸಲಾಗಿದೆ. ಇವರು ಪ್ರಸ್ತುತ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಾಗಾಗಿ ಇವರು ಮುಂದಿನ ಏಶಿಯನ್ ಗೇಮ್ಸ್ನಲ್ಲಿ ಪದಕ ಗೆಲ್ಲುತ್ತಾರೆಂಬುದು ಇಂಡಿಯನ್ ಬಾಕ್ಸಿಂಗ್ ಫೆಡರೇಶನ್ನ ಅಭಿಮತ. ಕಾಮನ್ವೆಲ್ತ್ನಲ್ಲಿ ಅಖಿಲ್ಗೆ ಪ್ರವೇಶ ಮಾತ್ರ ಸಿಕ್ಕಿದೆ. ಏಶಿಯನ್ ಗೇಮ್ಸ್ನಲ್ಲಿ ಇವರು ಪಾಲ್ಗೊಳ್ಳುವುದಿಲ್ಲ. ಆದರೆ ಇವರ ಸ್ಥಾನದಲ್ಲಿ ಚೋಟೆ ಲಾಲ್ ಏಶಿಯನ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆಂದು ಭಾವಿಸಲಾಗಿದೆ. 18ವರ್ಷದ ವಿಕಾಸ್ ವಿಶ್ವ ಯೂತ್ ಚಾಂಪಿಯನ್ ಮತ್ತು ಯೂತ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದವರು. ಏಶಿಯನ್ ಗೇಮ್ಸ್ಗೆ ಆಯ್ಕೆಯಾಗಿರುವ ಇವರು ಉತ್ತಮ ಪ್ರದರ್ಶನ ನೀಡುವ ಗುರಿಯಲ್ಲಿದ್ದಾರೆ. ಇನ್ನೂ ಅಮನ್ದೀಪ್ ಸಿಂಗ್, ಸುರಂಜಯ್ ಸಿಂಗ್ರ ಮೇಲೆ ಕೂಡಾ ಯಶಸ್ವಿ ಪ್ರದರ್ಶನ ನೀಡುವ ನಿರೀಕ್ಷೆಯಿಡಲಾಗಿದ್ದು, ಹೀಗಾಗಿ ಇವರು ತಮ್ಮ ಮೇಲಿನ ಜವಾಬ್ದಾರಿಯನ್ನು ಉತ್ತಮ ನೆಲೆಯಲ್ಲಿ ಈಡೇರಿಸಬೇಕಾಗಿದೆ.
ಒಲಿಂಪಿಕ್ ಕ್ವಾರ್ಟರ್ಫೈನಲಿಸ್ಟ್ ಅಖಿಲ್ ಕುಮಾರ್, ಒಂಭತ್ತು ಬಾರಿಯ ರಾಷ್ಟ್ರೀಯ ಚಾಂಪಿಯನ್ ದಿಲ್ಬಾಗ್ ಸಿಂಗ್ ತಮ್ಮ ವಿಭಾಗದಲ್ಲಿ ಯಶಸ್ವಿ ಬಾಕ್ಸರ್ಗಳೆನಿಸಿಕೊಂಡಿದ್ದಾರೆ. ವಿಜೆಂದರ್, ದಿನೇಶ್ ಕುಮಾರ್, ಮನ್ಪ್ರೀತ್ಸಿಂಗ್, ಪರಮ್ಜೀತ್ ಸಮೋಟಾರ ಮೇಲೆ ಕೂಡಾ ನಿರೀಕ್ಷೆಯಿಡಲಾಗಿದ್ದು, ಪದಕ ಗೆಲ್ಲುವ ವಿಶ್ವಾಸವಿಡಲಾಗಿದೆ.
2010ರ ಕಾಮನ್ವೆಲ್ತ್ ಗೇಮ್ಸ್ಗಾಗಿ ಅಮನ್ದೀಪ್ ಸಿಂಗ್(49ಕೆಜಿ), ಸುರಂಜಯ್ ಸಿಂಗ್(52ಕೆಜಿ), ಅಖಿಲ್ ಕುಮಾರ್(56ಕೆಜಿ), ಜೈ ಭಗವಾನ್(60 ಕೆಜಿ), ಮನೋಜ್ ಕುಮಾರ್(64ಕೆಜಿ), ದಿಲ್ಬಾಗ್ಸಿಂಗ್(69ಕೆಜಿ), ವಿಜೇಂದರ್ ಸಿಂಗ್(75ಕೆಜಿ), ದಿನೇಶ್ ಕುಮಾರ್(81ಕೆಜಿ), ಮನ್ಪ್ರೀತ್ ಸಿಂಗ್(91ಕೆಜಿ) ಹಾಗೂ ಪರಮ್ಜೀತ್ ಸಮೋಟಾ(+91ಕೆಜಿ) ಆಯ್ಕೆಯಾಗಿದ್ದಾರೆ.
2010ರ ಏಶಿಯನ್ ಗೇಮ್ಸ್ಗಾಗಿ ಅಮನ್ದೀಪ್ ಸಿಂಗ್(49ಕೆಜಿ), ಸುರಂಜಯ್ ಸಿಂಗ್(52ಕೆಜಿ), ಚೋಟೆ ಲಾಲ್ ಯಾದವ್(56ಕೆಜಿ), ವಿಕಾಸ್ ಕೃಷ್ಣನ್(60ಕೆಜಿ), ವಿ.ಸಂತೋಷ್ ಕುಮಾರ್(64ಕೆಜಿ), ದಿಲ್ಬಾಗ್ ಸಿಂಗ್(69ಕೆಜಿ), ವಿಜೇಂದರ್ ಸಿಂಗ್(75ಕೆಜಿ), ದಿನೇಶ್ ಕುಮಾರ್(81ಕೆಜಿ), ಮನ್ಪ್ರೀತ್ ಸಿಂಗ್(91ಕೆಜಿ) ಮತ್ತು ಪರಮ್ಜೀತ್ ಸಮೋಟಾ(+91ಕೆಜಿ) ಆಯ್ಕೆಯಾಗಿದ್ದಾರೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...