mail-img print-img

ಹೆಣ್ಣಿನ ಮುಂದೆ ಹೊಸ ಸವಾಲುಗಳು!

ಗುರುವಾರ - ಸೆಪ್ಟೆಂಬರ್ -02-2010

‘ತಾಯಂದಿರ ದಿನ ’‘ತಂದೆಯ ದಿನ ’-ಹೀಗೆ ಹತ್ತು ಹಲವಾರು ದಿನಗಳನ್ನು ಹೂ ಗುಚ್ಛಗಳ ವಿನಿಮಯ, ಎಸ್.ಎಮ್.ಎಸ್ ಮುಂತಾದವುಗಳ ಮೂಲಕ ಶುಭಾಶಯ ವಿನಿಮಯ ಮಾಡಿ ಜಗತ್ತಿನಾದ್ಯಂತ ಆಚರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗೆ ಸಂಭ್ರಮಿಸುವ ಇಂತಹ ದಿನಗಳು ಚಾರಿತ್ರಿಕ ವಾಗಿ ಯಾವುದೇ ಬದಲಾವಣೆಯನ್ನು ವಾಸ್ತವದಲ್ಲಿ ತರಲು ಸಾಧ್ಯವಿಲ್ಲ ಎಂಬುದೂ ಕೂಡ ನಮಗೀಗಾಗಲೇ ತಿಳಿದಿರುವ ವಿಚಾರ.

ಬಡತನದ ರೇಖೆಯ ಕೆಳಗೆ ಬದುಕುವ, ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರ ಬದುಕಿನಲ್ಲಂತೂ ಇಂತಹ ದಿನಗಳು ಯಾವ ಬದಲಾವಣೆಯನ್ನು ತರದು. ಅವರ ಬದುಕಿನ ಸಂಕೀರ್ಣ ತೆಯು ಇಂತಹ ದಿನಗಳ ಶುಭಾಶಯಗಳ ಒಣ ಮಾತುಗಳಿಂದ ಸರಳೀಕೃತಗೊಳ್ಳುವು ದಂತೂ ಸಾಧ್ಯವಿಲ್ಲದ ಮಾತಾಗಿದೆ.

70 ರ ದಶಕದಲ್ಲಿ ಕೃಷಿಯಲ್ಲಿ ದುಡಿಯುತ್ತಿದ್ದ ಮಹಿಳೆಯರ ಪ್ರಮಾಣ ಅಪಾರ ಪ್ರಮಾಣದಲ್ಲಿದ್ದರೂ ಹೊರ ಜಗತ್ತಿನಲ್ಲಿ ಉದ್ಯೋಗಿಗಳಾಗಿರುವ ಮಹಿಳೆಯರ ಸಂಖ್ಯೆ ಕಡಿಮೆ ಇತ್ತು. ಇಂದು ಖಾಸಗೀಕರಣ ಹಾಗೂ ಜಾಗತೀಕರಣದಿಂದಾಗಿ ಮಹಿಳೆಯರು ಕಾಲಿಡದ ಕ್ಷೇತ್ರಗಳೇ ಇಲ್ಲ.

ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಜಾತಿ-ವರ್ಗದ ಮಹಿಳೆಯರಿಗೂ ತಾಯ್ತನ ಎಂಬುದು ಲಿಂಗಾಧಾರಿತ ಸಮಾನತೆಗೆ ಸವಾಲಾಗಿರುವ ವಿಚಾರವಾಗಿದೆ. ಕುಟುಂಬದ ರಚನೆಗಳು ಹೆಣ್ಣಿನ ಶ್ರಮದ ಮೇಲೆಯೇ ಅವಲಂಬಿತವಾಗಿರುವುದಲ್ಲದೇ ಆಕೆಯ ಉದ್ಯೋಗದ ಕ್ಷೇತ್ರದಲ್ಲೂ ರಾಜಿಯಾಗುವಂತೆ ಒತ್ತಡಗಳನ್ನು ಹೇರುತ್ತಿವೆ.

ಕೆಲಸ ಬಿಡುವುದು, ಪಾರ್ಟ್ ಟೈಮ್ ಕೆಲಸ ಮಾಡುವುದು ಹೀಗೆ...

4-5 ವರ್ಷ ಉದ್ಯೋಗವಿಲ್ಲದೇ ಮನೆಯಲ್ಲಿಯೇ ಇರುವುದು ಇಂತಹ ಅನೇಕ ರಾಜಿಗಳನ್ನು ಮಾಡಿಕೊಳ್ಳುತ್ತಾ ಮಹಿಳೆಯ ಶ್ರಮವನ್ನು ಕುಟುಂಬದ ಭದ್ರ ನೆಲೆಗಾಗಿ ಮೀಸಲಾಗಿರಿಸುವುದು ಸಾಮಾನ್ಯವಾಗಿದೆ.

ಕಾರ್ಪೊರೇಟ್ ಕ್ಷೇತ್ರದಲ್ಲಿ ಮಹಿಳೆಯರ ಶ್ರಮ ಅನಿವಾರ್ಯವಾದ ಹಾಗೆ ಪ್ಲೆಕ್ಸಿ ಟೈಮ್, ಪಾರ್ಟ್‌ಟೈಮ್ ಹಾಗೂ ಮನೆಯಿಂದಲೇ ಕೆಲಸ ಮಾಡುವುದು-ಹೀಗೆ ಅನೇಕಾನೇಕ ರೀತಿಯ ಬದಲಾವಣೆಯಿಂದ ಮಹಿಳೆಯರ ಶ್ರಮವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೂ ಉದ್ಯೋಗ/ಕುಟುಂಬದ ಆಯ್ಕೆಯ ನಡುವಿನ ದ್ವಂದ್ವ ಮಹಿಳೆಯರ ಬದುಕಿನಲ್ಲಿ ಮುಂದುವರಿಯುತ್ತಲೇ ಇದೆ.

ಕಾರ್ಪೊರೇಟ್ ಜಗತ್ತಿನಲ್ಲಿ ಎಲ್ಲವೂ ಚೆನ್ನಾಗಿದೆ ಎಂದೇನೂ ಅಲ್ಲ. ಹೋರಾಟದ ಮಾತಿಗೆ ಇಲ್ಲಿ ಅರ್ಥವೇ ಇಲ್ಲ. ಬೇರೆ-ಬೇರೆ ಕ್ಷೇತ್ರದ ಮಹಿಳೆಯರು ಮನೆಗೆಲಸ ಎಂಬ ಉದ್ಯೋಗದ ಹೊರೆಯನ್ನು ನಿಭಾಯಿಸಿಕೊಂಡು ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಎದುರಿಸಲು ಅವರು ಹೋರಾಟವನ್ನು ಕೂಡಾ ಮಾಡುತ್ತಾರೆ.

ಗಾರ್ಮೆಂಟ್ ಮಹಿಳೆಯರು, ಕೃಷಿಯಲ್ಲಿನ ರೈತ ಮಹಿಳೆಯರು, ನಗರದಲ್ಲಿ ರಸ್ತೆ ಗುಡಿಸುವ ಮಹಿಳೆಯರು ಹೀಗೆ ಅನೇಕ ಸ್ತರದ ಮಹಿಳೆ ಯರು ಒಟ್ಟಾಗಿ ಎಲ್ಲಾ ಜಾತಿ , ವರ್ಗದ ಮಹಿಳೆ ಯರಿಗೂ ಎರಡು ರೀತಿಯ ಹೊರೆಯ ಕೆಲಸದ ಸವಾಲುಗಳು ಎಂದೆಂದಿಗೂ ಎದುರಾಗುತ್ತಲೇ ಇವೆ.

ಹಾಗಿದ್ದರೆ ಇದರೆಲ್ಲರ ಸಮಸ್ಯೆಯನ್ನು ಒಟ್ಟಾಗಿ ಹೋರಾಡುವಲ್ಲಿ , ಹೊಸ ರೀತಿಯ ಹಿಂಸೆ, ಸವಾಲುಗಳನ್ನು ಎದುರಿಸುವಲ್ಲಿ ಮಹಿಳಾ ಚಳವಳಿಯ ದಾರಿ ಏನಾಗಬೇಕಾಗಿದೆ ಎಂಬುದು ಕೂಡಾ ನಮ್ಮ ಮುಂದಿರುವ ತಾರ್ಕಿಕ ಪ್ರಶ್ನೆಯಾಗಿದೆ.

ಇವತ್ತು ಎಲ್ಲಾ ಉದ್ಯೋಗ ರಂಗಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವುದು ಅನಿವಾರ್ಯವಾದ ಹಾಗೆ, ಕುಟುಂಬದ ಅಳಿವು-ಉಳಿವಿನಲ್ಲೂ ಆಕೆಯ ಆರ್ಥಿಕ ಕೊಡುಗೆ ಅನಿವಾರ್ಯವಾಗಿದೆ. ಆಕೆಯ ಸ್ವಾತಂತ್ರ ಕೆಲವೊಮ್ಮೆ ಆಕೆಗೆ ಹೊರೆಯಾಗುವಷ್ಟು ದುರುಪಯೋಗ ಆಗುವ ರೀತಿಯಲ್ಲಿ ಎಲ್ಲಾ ಸ್ತರದ ಕುಟುಂಬದ ಮಹಿಳೆಯರ ಮೇಲೂ ಕೆಲಸದ ಒತ್ತಡಗಳು ಬೀಳತೊಡಗಿದೆ.

ಇಂತಹ ಸ್ಥಿತಿಯಲ್ಲಿ ಪುರುಷರನ್ನು ಕುಟುಂಬದ ಒಳಗಿನ, ಸ್ತ್ರೀವಾದಿ ಜಗತ್ತಿನ ಆವರಣದೊಳಕ್ಕೆ ಎಳೆಯುವಂತಹ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಪ್ರಯತ್ನಗಳು ನಡೆಯಬೇಕಾಗಿದೆ. ಅದು ಮನೆಯಲ್ಲಿ ತಂದೆಯ ಪಾತ್ರವನ್ನು ಬಲಪಡಿಸು ವುದಾಗಿರಬಹುದು, ಸಮಾನ ಸಂಗಾತಿ ತನವನ್ನು ನಿರೀಕ್ಷಿಸುವುದಾಗಿರಬಹುದು, ಮನೆಯಿಂದ ಕೆಲಸ ಮಾಡುವುದನ್ನು ಬೆಂಬಲಿಸವುದಾಗಿರಬಹುದು ಇಂತಹ ಪ್ರಯತ್ನಗಳು ಇಂದು ನಡೆಯುವ ಅಗತ್ಯವಿದೆ.

ಈ ಕೆಲಸ ವೈಯಕ್ತಿಕ ನೆಲೆಯಲ್ಲಿ ನಡೆದರೆ ಸಾಲದು. ಮುಖ್ಯ ವಾಹಿನಿಯ ಸಂಸ್ಕೃತಿಯ ಪಿತೃಪ್ರಧಾನ ಮೌಲ್ಯದ ಸಾಂಸ್ಕೃತಿಕ ಮೌಲ್ಯಗಳ ಸವಾಲುಗಳನ್ನು ಎದುರಿಸುವಲ್ಲಿ ಚಳವಳಿ, ಸರಕಾರ, ಸಮುದಾಯ ಒಟ್ಟಾಗಿ ಪ್ರಯತ್ನಿಸುವ ತುರ್ತು ನಮ್ಮ ಮುಂದಿದೆ.

-ಮಾನಸ                                                                                                                                  

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ