mail-img print-img

ಗುಜರಾತ್ ಹತ್ಯಾಕಾಂಡ: ಸತ್ಯ ಬಹಿರಂಗಕ್ಕೆ ಝಡಾಫಿಯಾ ಸಿದ್ಧ?

ಶನಿವಾರ - ಸೆಪ್ಟೆಂಬರ್ -04-2010

ಅಹ್ಮದಾಬಾದ್, ಸೆ.3: ಗುಜರಾತ್ ದಂಗೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖೆ ತಂಡ (ಸಿಟ್) ತನ್ನ ಕೊರಳ ಸುತ್ತ ಕುಣಿಕೆಯನ್ನು ಬಿಗಿಗೊಳಿಸಿರುವುದರಿಂದ ಕಂಗಾಲಾಗಿರುವ ರಾಜ್ಯದ ಮಾಜಿ ಗೃಹ ಸಹಾಯಕ ಸಚಿವ ಗೋರ್ಧನ್ ಝಡಾಫಿಯಾ, ಎಲ್ಲವನ್ನೂ ಬಹಿರಂಗ ಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾದಲ್ಲಿ ಅವರ ಹೇಳಿಕೆಯು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕೊರಳಿಗೆ ಉರುಳಾಗುವ ಸಂಭವವಿದೆ.

ಝಡಾಫಿಯಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ.ಕೆ. ಟಂಡನ್ ಹಾಗೂ ಪಿ.ಬಿ. ಗೊಂಡಿಯಾ ದಂಗೆಯಲ್ಲಿ ವಹಿಸಿರುವ ಪಾತ್ರಗಳ ಕುರಿತು ತನಿಖೆಗಾಗಿ ಸಿಟ್‌ಗೆ ಹೆಚ್ಚಿನ ಸಮಯಾವಕಾಶವನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದ ಬಳಿಕ, ಝಡಾಫಿಯಾ ತನಿಖೆ ಸಂಸ್ಥೆಗೆ 10 ಪುಟಗಳ ಪತ್ರವೊಂದನ್ನು ಬರೆದು, ತಾನು ಪ್ರಕರಣಗಳ ಸಾಕ್ಷಿಯಾಗಲು ಬಯಸಿದ್ದೇನೆ. ಆದುದರಿಂದ ವಿಚಾರಣೆಗಾಗಿ ಇನ್ನೊಮ್ಮೆ ಸಮನ್ಸ್ ಕಳುಹಿಸಬೇಕೆಂದು ವಿನಂತಿಸಿದ್ದಾರೆ. ಈಗಾಗಲೇ ಸಿಟ್ ಝಡಾಫಿಯಾರನ್ನು ಮೂರು ಬಾರಿ ಪ್ರಶ್ನಿಸಿದೆ.

ಝಡಾಫಿಯಾ ಮುಖ್ಯಮಂತ್ರಿ ಮೋದಿಯವರ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊರಿಸ ಬಯಸಿರುವುದು ಅವರ ಪತ್ರದಿಂದ ಸ್ಪಷ್ಟವಾಗಿದೆ ಎಂದು ಸಿಟ್‌ನ ಮೂಲಗಳು ತಿಳಿಸಿವೆ.
ಝಡಾಫಿಯಾರನ್ನು ವಿಚಾರಣೆಗೆ ಕರೆಸಿದಲ್ಲಿ, ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ದಹನವಾಗಿ 59 ಪ್ರಯಾಣಿಕರು ಅಸು ನೀಗಿದ ಬಳಿಕ 2007ರ ಫೆ.27ರಂದು ಸಂಜೆ ನಡೆದ ವಿವಾದಿತ ಸಭೆಯೊಂದರ ಬಗ್ಗೆ ಅವರು ಬೆಳಕು ಚೆಲ್ಲಬಹುದೆಂದು ಹೇಳಲಾಗಿದೆ. ಈ ಹಿಂದಿನ ವಿಚಾರಣೆಗಳ ವೇಳೆ ಈ ಸಭೆಯ ಬಗ್ಗೆ ತನಗೇನೂ ತಿಳಿದಿಲ್ಲವೆಂದು ಅವರು ಹೇಳಿದ್ದರು. ಮರುದಿನ ಹಿಂಸೆ ಸ್ಫೋಟಗೊಳ್ಳಲು ಕಾರಣವಾದ ಬಂದ್ ಕರೆಗೆ ತನ್ನ ಬೆಂಬಲವಿರಲಿಲ್ಲವೆಂದು ಝಡಾಫಿಯ ಸ್ಪಷ್ಟಪಡಿಸಿದ್ದರು.

ಳೆದ ವರ್ಷ ದಾಖಲಿಸಿದ್ದ ಹೇಳಿಕೆಗಳಲ್ಲಿ ಝಡಾಫಿಯಾ ಮೋದಿಯವರ ವಿರುದ್ಧ ಒಂದು ಶಬ್ದವನ್ನೂ ಹೇಳಿರಲಿಲ್ಲ. ಆದಾಗ್ಯೂ, ಝಡಾಫಿಯಾ ದಂಗೆಯ ಪಿತೂರಿಯ ಭಾಗವಾಗಿದ್ದರೆಂದು ಹಕ್ಕು ಗುಂಪು ಜನ ಸಂಘರ್ಷ ಮೋರ್ಚಾ (ಜೆಎಸ್‌ಎಂ) ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ್ದ ಅವರು, ತಾನು ಜೆಎಸ್‌ಎಂ ಪರ ವಕೀಲ ಮುಕುಲ್ ಸಿನ್ಹಾರನ್ನು ಭೇಟಿಯಾಗಿದ್ದ ವೇಳೆ, ತನಗೆ ಏಕಾಂಗಿಯಾಗಿ ಮೋದಿ ಸರಕಾರವನ್ನು ಉರುಳಿಸುವ ಸಾಧ್ಯತೆಯಿದೆಯೆಂದು ಅವರು ಸಲಹೆ ನೀಡಿದ್ದರೆಂದು ಸಿಟ್‌ಗೆ ತಿಳಿಸಿದ್ದರು. ಆದಾಗ್ಯೂ, ತಾನು ಸರಕಾರದ ಕ್ರಮಗಳನ್ನು ವಿರೋಧಿಸುತ್ತಿದ್ದು, ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿರೋಧ ಮುಂದುವರಿಸುವುದಾಗಿ ಸಿನ್ಹಾಗೆ ತಿಳಿಸಿದ್ದೆನೆಂದು ಅವರೀಗ ಪ್ರತಿಪಾದಿಸುತ್ತಿದ್ದಾರೆ. ಝಡಾಫಿಯಾ, ಟಂಡನ್ ಹಾಗೂ ಗೊಂಡಿಯಾರ ವಿರುದ್ಧ ತನಗೆ ಸಾಕ್ಷಗಳು ಲಭಿಸಿವೆಯೆಂದು ದಂಗೆಗೆ ಬಲಿಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯ್ಯಿ ಜಾಫ್ರಿ ಸಲ್ಲಿಸಿದ ದೂರಿನ ಬಗ್ಗೆ ತನ್ನ ತನಿಖೆ ವರದಿಯಲ್ಲಿ ಸಿಟ್ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಝಕಿಯ್ಯ, ಪ್ರಕರಣದಲ್ಲಿ ಮೋದಿ, ಝಡಾಫಿಯಾ ಹಾಗೂ ಇತರ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ ಒಟ್ಟು 63 ಮಂದಿಯ ವಿರುದ್ಧ ದೂರು ಸಲ್ಲಿಸಿದ್ದರು. ಪ್ರಕರಣದ ಆರೋಪಿಯಾಗಿ ಝಡಾಫಿಯಾರ ಹೇಳಿಕೆಗಿಂತ ಸಾಕ್ಷಿಯಾಗಿ ಹೆಚ್ಚಿನ ಮಹತ್ವ ಪಡೆಯುವ ಸಾಧ್ಯತೆಯಿರುವುದರಿಂದ ಅವರು ಸಿಟ್‌ನ ಮುಂದೆ ಹೇಳಿಕೆ ನೀಡಲು ಅವಸರಿಸುತ್ತಿದ್ದಾರೆನ್ನಲಾಗಿದೆ. ನರೋಡಾ ಪ್ರಕರಣದ ಆರೋಪಿಗಳಾದ ಮಾಜಿ ಸಚಿವೆ ಮಾಯಾ ಕೊಡ್ನಾನಿ, ಹಿರಿಯ ವಿಎಚ್‌ಪಿ ನಾಯಕ ಜೈದೀಪ್ ಪಟೇಲ್ ಹಾಗೂ ಬಾಬು ಬಜರಂಗಿಯ ವಿಚಾರಣೆಯನ್ನು ಸಿಟ್ ಈಗಾಗಲೇ ನಡೆಸಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ