mail-img print-img

ಒತ್ತೆಯಾಳು ಪೊಲೀಸ್‌ನ ಶವ ಪತ್ತೆ

ಶನಿವಾರ - ಸೆಪ್ಟೆಂಬರ್ -04-2010

ಪಾಟ್ನಾ, ಸೆ.3: ನಕ್ಸಲೀಯರಿಂದ ಅಪಹರಣಕ್ಕೊಳ ಗಾಗಿದ್ದ ಬಿಹಾರದ ಮಿಲಿಟರಿ ಪೊಲೀಸ್ ಹವಿಲ್ದಾರ್ ಲೂಕಸ್ ಟೇಟೆ ಎಂಬವರ ಗುಂಡು ದಾಳಿಗೊಳಗಾದ ಮೃತದೇಹವು ಲಖಿಸರಾಯಿಯಲ್ಲಿ ಪತ್ತೆಯಾಗಿದೆ. ಉಳಿದ ಮೂವರ ಹತ್ಯೆ ನಡೆಸಲು ಮಾವೊವಾದಿಗಳು ವಿಧಿಸಿರುವ ಗಡುವು ಅಂತ್ಯಗೊಂಡಿದ್ದು, ಅವರ ರಕ್ಷಣೆಗಾಗಿ ಭದ್ರತಾ ಪಡೆಗಳು ಶೋಧಕಾರ್ಯವನ್ನು ತೀವ್ರಗೊಳಿಸಿವೆ. ಜಿಲ್ಲೆಯ ಕಾಜ್ರಾ ಪೊಲೀಸ್ ವ್ಯಾಪ್ತಿಯ ಸಿಮ್ರಾತಾರಿ ಶೃಂಗಋಷಿ ಅಣೆಕಟ್ಟಿನ ಬಳಿ ಪತ್ತೆಯಾದ ಮೃತದೇಹವು ಅಪಹೃತ ಪೊಲೀಸ್ ಅಧಿಕಾರಿ ಲೂಕಾಸ್ ಟೇಟೆಯವರದೆಂದು ಗುರುತಿಸಲಾಗಿದೆ. ಬೆಟ್ಟಗಳಿಂದಾವೃತವಾದ ಕಾಡಿನಲ್ಲಿ ರಕ್ತದ ಕಾಲುವೆಯ ನಡುವೆ ಮೃತದೇಹ ಪತ್ತೆಯಾಗಿದೆ ಎಂದು ಲಖಿಸರಾಯಿಯ ಪೊಲೀಸ್ ಅಧೀಕ್ಷಕ ರಂಜಿತ್‌ಕುಮಾರ್ ಮಿಶ್ರಾ ತಿಳಿಸಿದ್ದಾರೆ.


ಹತ ಹವಿಲ್ದಾರ್ ಲೂಕಾಸ್ ಟೇಟೆ ಹಾಗೂ ನಕ್ಸಲರು ಮೃತದೇಹದ ಸಮೀಪ

ಶುಕ್ರವಾರ ಬಿಟ್ಟು ಹೋಗಿದ್ದ ಕರಪತ್ರ.

ಮೃತ ದೇಹದ ಸಮೀಪ ಒಂದು ಕರಪತ್ರವೂ ದೊರೆತಿದೆ. ಅದರಲ್ಲಿ, ತಾವು ಹವಿಲ್ದಾರನನ್ನು ಕೊಂದಿದ್ದೇವೆಂದು ಮಾವೊವಾದಿಗಳು ಪ್ರತಿಪಾದಿಸಿದ್ದಾರೆ. ಬಂದಿಖಾನೆಯಲ್ಲಿರುವ ತಮ್ಮ 8 ಮಂದಿ ಸಹಚರರನ್ನು ರಾಜ್ಯ ಸರಕಾರ ಕೂಡಲೇ ಬಿಡುಗಡೆಗೊಳಿಸದಿದ್ದಲ್ಲಿ ತಾವು ಒತ್ತೆ ಸೆರೆ ಹಿಡಿದಿರುವ ಇತರ ಮೂವರ ಗತಿಯೂ ಇದೇ ರೀತಿಯಾಗುತ್ತದೆ ಎಂದು ದುಷ್ಕರ್ಮಿಗಳು ಬೆದರಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ನಿನ್ನೆ ತಮ್ಮ ಬೇಡಿಕೆ ಈಡೇರಿಕೆಗೆ ವಿಧಿಸಿದ್ದ ಸಂಜೆ 4ರ ಗಡವು ಮುಗಿದೊಡನೆಯೇ ಮಾವೊವಾದಿಗಳ ವಕ್ತಾರನೆಂದು ಹೇಳಿಕೊಂಡ ಅವಿನಾಶ್ ಎಂಬಾತ, ಸಬ್‌ಇನ್ಸ್‌ಪೆಕ್ಟರ್ ಅಭಯಪ್ರಸಾದ್ ಯಾದವ್ ಎಂಬವರ ಹತ್ಯೆ ನಡೆಸಿದ್ದೇವೆಂದು ದೂರವಾಣಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದನು. ಆದರೆ, ಅವರ ಮೃತದೇಹ ಈವರೆಗೆ ಪತ್ತೆಯಾಗಿಲ್ಲ ಹಾಗೂ ಈ ಬಗ್ಗೆ ಅಧಿಕೃತ ದೃಢೀಕರಣವೂ ಹೊರ ಬಿದ್ದಿಲ್ಲ. ಆದಾಗ್ಯೂ, ಅವರ ಹತ್ಯೆಯಾಗಿರುವುದು ಹೌದೆಂದು ನಿನ್ನೆ ಗುಪ್ತಚರ ಅಧಿಕಾರಿಗಳು ದಿಲ್ಲಿಯಲ್ಲಿ ಹೇಳಿದ್ದರು.

ಇದೇ ವೇಳೆ, ಸಿಆರ್‌ಪಿಎಫ್‌ನ ಕೋಬ್ರಾ ಪಡೆ, ಬಿಎಂಪಿ, ಎಸ್‌ಟಿಎಫ್ ಹಾಗೂ ಬಿಹಾರ ಪೊಲೀಸ್‌ನ ಎಸ್‌ಎಪಿ ಪಡೆಗಳು ಲಖಿಸರಾಯಿಯಲ್ಲಿ ರವಿವಾರ ನಡೆದ ಎನ್‌ಕೌಂಟರ್‌ನ ವೇಳೆ ನಕ್ಸಲೀಯರಿಂದ ಅಪಹರಿಸಲ್ಪಟ್ಟಿರುವ ಪೊಲೀಸರ ರಕ್ಷಣೆಗಾಗಿ ಮಾವೊ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆಯೆಂದು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಪೊಲೀಸ್ ಮಹಾನಿರೀಕ್ಷಕ ಕೆ.ಎಸ್. ದ್ವಿವೇದಿ ತಿಳಿಸಿದ್ದಾರೆ. ಕೋಬ್ರಾ ಯೋಧರನ್ನೊಳಗೊಂಡ ಬಿಎಸ್‌ಎಫ್ ಹೆಲಿಕಾಪ್ಟರ್ ಗಳು ನಕ್ಸಲರ ಬೇಟೆಯಲ್ಲಿ ತೊಡಗಿವೆಯೆಂದು ಅವರು ಹೇಳಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ