ಹೊಸದಿಲ್ಲಿ, ಜ.27: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮ ಗಣಿಗಾರಿಕೆಯ ಆರೋಪದ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡುವುದರೊಂದಿಗೆ ವಿದೇಶಾಂಗ ಸಚಿವರು ನಿಟ್ಟುಸಿರು ಬಿಡುವಂತಾಗಿದೆ. ಅವರ ವಿರುದ್ಧದ
ವಿಚಾರಣೆಯು ‘ಅಪಕ್ವ’ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ. ‘‘ನಾವು ವಿಚಾರಣೆಗೆ ತಡೆಯಾಜ್ಞೆ ನೀಡಲು ಇಚ್ಛಿಸಿದ್ದೇವೆ. ಅದರಿಂದಾಗಿ, ಎಫ್ಐಆರ್ ಒಂದರ ಆಧಾರದಲ್ಲಿ ಕರ್ನಾಟಕದ ಲೋಕಾಯುಕ್ತವು ತನಿಖೆಗೆ ನೀಡಿರುವ ಆದೇಶವು ತಡೆ ಹಿಡಿಯಲ್ಪಡುತ್ತದೆ’’ ಎಂದು ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಹಾಗೂ ಜ್ಞಾನಸುಧಾ ಮಿಶ್ರಾರಿದ್ದ ಪೀಠವೊಂದು ತೀರ್ಪು ನಿಡಿದೆ.
ಕರ್ನಾಟಕ ಹೈಕೋರ್ಟ್ನ ಆದೇಶವನ್ನು ವಿರೋಧಿಸಿ ಕೃಷ್ಣ ಜ. 20ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಅಲ್ಲಿಸಿದ್ದರು. ಪೂರಕ ವರದಿ ಮಂಡನೆಯಾಗದ ಕಾರಣ ಲೋಕಾಯುಕ್ತದ ಮುಂದಿನ ವಿಚಾರಣೆ ‘ಅಪೂರ್ಣ’ವಾಗಿರುವುದರಿಂದ ಲೋಕಾಯುಕ್ತ ನ್ಯಾಯಾಲಯ ತನಿಖೆಗೆ ನೀಡಿರುವ ಆದೇಶವು ‘ಅಪಕ್ವ’ವಾಗಿದೆಯೆಂದು ನ್ಯಾಯಪೀಠ ವ್ಯಾಖ್ಯಾನಿಸಿದೆ. ಪ್ರಕರಣದ ಸಂಬಂಧ ಕರ್ನಾಟಕ ಸರಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳೊಳಗೆ ಉತ್ತರ ಬಯಸಿದ್ದ ನ್ಯಾಯಪೀಠವು ‘ಸತ್ಯ ಹೊರ ಬರಬೇಕೆಂಬ ಕುತೂಹಲದಲ್ಲಿ ತಾವಿದ್ದೇವೆ’ ಎಂದೂ ಹೇಳಿದೆ.
ಕೃಷ್ಣರ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದೆಂದು ಅರ್ಜಿದಾರ ಟಿ.ಜೆ. ಥೋಮಸ್ ಎಂಬವರ ಪರ ವಕೀಲ ಪ್ರಶಾಂತ್ ಭೂಷಣ್ ವಾದಿಸಿದಾಗ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣೆಗೆ ತಡೆಯಾಜ್ಞೆ ನೀಡಿದಲ್ಲಿ ಲೋಕಾಯುಕ್ತ ನ್ಯಾಯಾಲಯದ ಆದೇಶದಂತೆ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯ ಕುರಿತ ಇಡೀ ವಿಚಾರಣಾ ಪ್ರಕ್ರಿಯೆಯೇ ‘ನಿಲ್ಲುತ್ತದೆ’ ಎಂದು ಅವರು ವಾದಿಸಿದರು.
ಆದಾಗ್ಯೂ, ಅವರ ವಾದದಿಂದ ಪ್ರಭಾವಿತವಾಗದ ಪೀಠ, ಲೋಕಾಯುಕ್ತದ ತನಿಖೆ ಮುಗಿಯುವುದು ಮೇಲ್ನೋಟಕ್ಕೆ ಅಪೇಕ್ಷಣೀಯವಾಗಿದೆಯೆಂದು ಅಭಿಪ್ರಾಯಿಸಿತು.
‘‘ಮೇಲ್ನೋಟಕ್ಕೆ ಪ್ರಬಲ ಪ್ರಕರಣವಾಗಬೇಕಾದರೆ ಲೋಕಾಯುಕ್ತ ವರದಿಗೆ ಇನ್ನೊಂದು ವರದಿ ಅಥವಾ ಪೂರಕ ವರದಿ ಬೆಂಬಲವಾಗಿರಬೇಕು. ಲೋಕಾಯುಕ್ತದ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಪ್ರಕರಣವನ್ನು ನ್ಯಾಯಾಲಯಕ್ಕೆ ತರಲಾಗಿದೆ. ನೀವು ಪರಿಸ್ಥಿತಿಯೊಂದನ್ನು ನಿರ್ಮಿಸಲಾಗದು. ಪರಿಸ್ಥಿತಿಯೊಂದಿಗೆ ನೀವು ಸಾಗಬೇಕು’’ ಎಂದು ಕರ್ನಾಟಕ ಹೈಕೋರ್ಟ್ನ ಆದೇಶಕ್ಕೆ ತಡೆ ನೀಡದಂತೆ ಪದೇ ಪದೇ ಒತ್ತಾಯಿಸಿದ ಪ್ರಶಾಂತ್ ಭೂಷಣ್ರಿಗೆ ನ್ಯಾಯ ಪೀಠ ಹೇಳಿತು. ಆದಾಗ್ಯೂ, ತಾವು ಮಧ್ಯಾಂತರ ಆದೇಶವನ್ನು ಜಾರಿ ಮಾಡುತ್ತೇವೆ. ಮುಂದೆ ರಾಜ್ಯ ಸರಕಾರ ಹಾಗೂ ದೂರುದಾರರು ಪ್ರತಿ ಅಫಿದಾವಿತ್ಗಳನ್ನು ಸಲ್ಲಿಸಿದ ಬಳಿಕ ‘ಎಲ್ಲ ವಿಚಾರವನ್ನು ಪರಿಶೀಲಿಸುತ್ತೇವೆಂದು ನ್ಯಾಯಾಧೀಶರು ತಿಳಿಸಿದರು.
1999ರಿಂದ 2004ರ ವರೆಗೆ ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆಯೆನ್ನಲಾದ ಅನಧಿಕೃತ ಗಣಿಗಾರಿಕೆಯ ಕುರಿತು ಲೋಕಾಯುಕ್ತ ಪೊಲೀಸರ ತನಿಖೆ ಹಾಗೂ ಆ ಸಂಬಂಧದ ದೂರನ್ನು ರದ್ದು ಪಡಿಸುವಂತೆ ಕೃಷ್ಣ ಸುಪ್ರೀಂ ಕೋರ್ಟ್ನ್ನು ಕೋರಿದ್ದರು. ಗಣಿಗಾರಿಕೆಯ ಕುರಿತು ಸಂಪುಟದ ನಿರ್ಧಾರವು 34 ಸಚಿವರ ಸಂಯುಕ್ತ ನಿರ್ಧಾರವಾಗಿದೆ. ಆದುದರಿಂದ ಅದಕ್ಕೆ ಒಬ್ಬನನ್ನೇ ಹೊಣೆ ಮಾಡುವಂತಿಲ್ಲವೆಂದು ಕೃಷ್ಣರ ಪರ ವಕೀಲ ಕೆ.ಕೆ. ವೇಣು ಗೋಪಾಲ್ ವಾದಿಸಿದರು.
ಅದಿರು ಸಮೃದ್ಧ ಪ್ರದೇಶದ ಅರಣ್ಯವನ್ನು ಮೀಸಲು ರಹಿತ ಮಾಡಿದ ವಿಚಾರದಲ್ಲಿ ತನಿಖೆ ಮುಂದುವರಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು.
ಮೀಸಲು ರಹಿತಗೊಳಿಸಿದ 11 ಸಾವಿರ ಚ.ಕಿ.ಮೀ. ಪ್ರದೇಶದಲ್ಲಿ ಗಣಿಗಾರಿಕೆಯ ಮಂಜೂರಾತಿ ಅರ್ಹತೆಯ ಆಧಾರದಲ್ಲಿ ನಡೆದಿಲ್ಲವೆಂದು ಪ್ರಶಾಂತ್ ಭೂಷಣ್ ವಾದಿಸಿದರು. ಆದಾಗ್ಯೂ, ಸರಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ನ ದುರುಪಯೋಗ ಕೃಷ್ಣರಿಂದಾಗಿದೆ ಎಂಬ ಆರೋಪದ ಕುರಿತು ತನಿಖೆಯನ್ನು ಹೈಕೋರ್ಟ್ ‘ಅದರಲ್ಲಿ ಸಂಜ್ಞೇಯ ಅಪರಾಧ ಏನೂ ಇಲ್ಲದಿರುವುರಿಂದ ತನಿಖೆಯ ಅಗತ್ಯವಿಲ್ಲವೆಂದು ಕಾರಣ ನೀಡಿ ರದ್ದುಗೊಳಿಸಿತು.
ಕೃಷ್ಣರ ವಿರುದ್ಧ ಖಾಸಗಿ ದೂರೊಂದನ್ನು ಆಧರಿಸಿ ಲೋಕಾಯುಕ್ತ ನ್ಯಾಯಾಲಯವು ಕಳೆದ ಡಿ. 8ರಂದು ವಿಚಾರಣೆ ಆರಂಭಿಸಿತ್ತು.
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್ತೆಂಡೂಲ್ಕರ್ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...