ಹೈದರಾಬಾದ್, ಜ.27: ನರಹತ್ಯೆಯಿಂದ ತಮಗೆ ಗುಪ್ತ ನಿಧಿಯೊಂದು ದೊರಕುವುದೆಂಬ ಮೂಢ ನಂಬಿಕೆಯಿಂದ ಜನರ ಗುಂಪೊಂದು 14 ವರ್ಷದ ಬಾಲಕನೊಬ್ಬನ ಹತ್ಯೆ ನಡೆಸಿದ ದಾರುಣ ಘಟನೆ ಆಂಧ್ರ ಪ್ರದೇಶದ ನಿರ್ಮಲ ಪಟ್ಟಣದಲ್ಲಿ ಸಂಭವಿಸಿದೆಯೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಅದಿಲಾಬಾದ್ ಪಟ್ಟಣದ ಹೊರ ವಲಯದ ಶ್ಯಾಮಗಡ ಕೋಟೆಯಲ್ಲಿ ಗಣೇಶ ಎಂಬ ಈ ಬಾಲಕನ ಮೃತ ದೇಹವನ್ನು ಪೊಲೀಸರು ನಿನ್ನೆ ಪತ್ತೆ ಹಚ್ಚಿದ್ದಾರೆ. ಬಾಲಕನನ್ನು ನಿಧಿಯ ಆಕಾಂಕ್ಷಿಗಳಿಗೆ ರೂ. 20 ಸಾವಿರಕ್ಕೆ ಮಾರಾಟ ಮಾಡಿದ್ದನೆನ್ನಲಾಗಿ ರುವ ರಾಜು ಎಂಬಾತನನ್ನು ಬಂಧಿಸಲಾಗಿದ್ದು, ಆತನನ್ನು ಬಲಿ ಕೊಟ್ಟ ತಂಡದ ಎಂಟು ಮಂದಿ ಸದಸ್ಯರು ಇನ್ನೂ ಪತ್ತೆಯಾಗಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಅಮಾವಾಸ್ಯೆಯಂದು ಬಾಲಕನೊಬ್ಬನನ್ನು ಬಲಿಕೊಟ್ಟರೆ ಕೋಟೆಯೊಳಗಿನ ಗುಪ್ತ ನಿಧಿ ತಮಗೆ ಲಭಿಸುವುದೆಂಬ ಮೂಢ ನಂಬಿಕೆ ಯಿಂದ ಜ.24-25ರ ನಡುವಿನ ಅಮಾ ವಾಸ್ಯೆಯ ರಾತ್ರಿ ದುಷ್ಕರ್ಮಿಗಳು ಗಣೇಶನನ್ನು ಬಲಿ ನೀಡಿದ್ದರು. ಶವವನ್ನು ಅದೇ ಪ್ರದೇಶದಲ್ಲಿ ಹುಗಿಯಲಾಗಿದ್ದು, ಪೊಲೀಸರು ನಿನ್ನೆ ಅದನ್ನು ಮೇಲೆತ್ತಿದ್ದಾರೆ. ಖಾಸಗಿ ಶಾಲೆಯೊಂದರ 9ನೆ ತರಗತಿಯ ವಿದ್ಯಾರ್ಥಿಯಾಗಿದ್ದ ಗಣೇಶನನ್ನು ತಿಂಡಿಯ ಆಸೆ ತೊರಿಸಿ ರಾಜು ಅಪಹರಿಸಿದ್ದ ನೆಂದು ಬಾಲಕನ ಕುಟುಂಬಿಕರು ಆರೋಪಿಸಿ ದ್ದಾರೆ. ತಾನು ಪ್ರಭಾಕರ ಎಂಬಾತನಿಗೆ ಗಣೇಶ ನನ್ನು ಮಾರಾಟ ಮಾಡಿರುವುದನ್ನು ವಿಚಾರಣೆಯ ವೇಳೆ ರಾಜು ಒಪ್ಪಿಕೊಂಡಿದ್ದಾನೆನ್ನಲಾಗಿದೆ. ಪಟ್ಟಣದ ಹಾಗೂ ಇತರ ಪ್ರದೇಶಗಳ ಅನೇಕರು ಗುಪ್ತ ನಿಧಿಯ ಬಗ್ಗೆ ಹಾಗೂ ಮಾನವ ಬಲಿಯಿಂದ ಅದು ಕಾಣಿಸಿಕೊಳ್ಳುವ ಬಗ್ಗೆ ನಂಬಿಕೆ ಹೊಂದಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...