ಹೈದರಾಬಾದ್, ಜ.27: ನರಹತ್ಯೆಯಿಂದ ತಮಗೆ ಗುಪ್ತ ನಿಧಿಯೊಂದು ದೊರಕುವುದೆಂಬ ಮೂಢ ನಂಬಿಕೆಯಿಂದ ಜನರ ಗುಂಪೊಂದು 14 ವರ್ಷದ ಬಾಲಕನೊಬ್ಬನ ಹತ್ಯೆ ನಡೆಸಿದ ದಾರುಣ ಘಟನೆ ಆಂಧ್ರ ಪ್ರದೇಶದ ನಿರ್ಮಲ ಪಟ್ಟಣದಲ್ಲಿ ಸಂಭವಿಸಿದೆಯೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಅದಿಲಾಬಾದ್ ಪಟ್ಟಣದ ಹೊರ ವಲಯದ ಶ್ಯಾಮಗಡ ಕೋಟೆಯಲ್ಲಿ ಗಣೇಶ ಎಂಬ ಈ ಬಾಲಕನ ಮೃತ ದೇಹವನ್ನು ಪೊಲೀಸರು ನಿನ್ನೆ ಪತ್ತೆ ಹಚ್ಚಿದ್ದಾರೆ. ಬಾಲಕನನ್ನು ನಿಧಿಯ ಆಕಾಂಕ್ಷಿಗಳಿಗೆ ರೂ. 20 ಸಾವಿರಕ್ಕೆ ಮಾರಾಟ ಮಾಡಿದ್ದನೆನ್ನಲಾಗಿ ರುವ ರಾಜು ಎಂಬಾತನನ್ನು ಬಂಧಿಸಲಾಗಿದ್ದು, ಆತನನ್ನು ಬಲಿ ಕೊಟ್ಟ ತಂಡದ ಎಂಟು ಮಂದಿ ಸದಸ್ಯರು ಇನ್ನೂ ಪತ್ತೆಯಾಗಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ಅಮಾವಾಸ್ಯೆಯಂದು ಬಾಲಕನೊಬ್ಬನನ್ನು ಬಲಿಕೊಟ್ಟರೆ ಕೋಟೆಯೊಳಗಿನ ಗುಪ್ತ ನಿಧಿ ತಮಗೆ ಲಭಿಸುವುದೆಂಬ ಮೂಢ ನಂಬಿಕೆ ಯಿಂದ ಜ.24-25ರ ನಡುವಿನ ಅಮಾ ವಾಸ್ಯೆಯ ರಾತ್ರಿ ದುಷ್ಕರ್ಮಿಗಳು ಗಣೇಶನನ್ನು ಬಲಿ ನೀಡಿದ್ದರು. ಶವವನ್ನು ಅದೇ ಪ್ರದೇಶದಲ್ಲಿ ಹುಗಿಯಲಾಗಿದ್ದು, ಪೊಲೀಸರು ನಿನ್ನೆ ಅದನ್ನು ಮೇಲೆತ್ತಿದ್ದಾರೆ. ಖಾಸಗಿ ಶಾಲೆಯೊಂದರ 9ನೆ ತರಗತಿಯ ವಿದ್ಯಾರ್ಥಿಯಾಗಿದ್ದ ಗಣೇಶನನ್ನು ತಿಂಡಿಯ ಆಸೆ ತೊರಿಸಿ ರಾಜು ಅಪಹರಿಸಿದ್ದ ನೆಂದು ಬಾಲಕನ ಕುಟುಂಬಿಕರು ಆರೋಪಿಸಿ ದ್ದಾರೆ. ತಾನು ಪ್ರಭಾಕರ ಎಂಬಾತನಿಗೆ ಗಣೇಶ ನನ್ನು ಮಾರಾಟ ಮಾಡಿರುವುದನ್ನು ವಿಚಾರಣೆಯ ವೇಳೆ ರಾಜು ಒಪ್ಪಿಕೊಂಡಿದ್ದಾನೆನ್ನಲಾಗಿದೆ. ಪಟ್ಟಣದ ಹಾಗೂ ಇತರ ಪ್ರದೇಶಗಳ ಅನೇಕರು ಗುಪ್ತ ನಿಧಿಯ ಬಗ್ಗೆ ಹಾಗೂ ಮಾನವ ಬಲಿಯಿಂದ ಅದು ಕಾಣಿಸಿಕೊಳ್ಳುವ ಬಗ್ಗೆ ನಂಬಿಕೆ ಹೊಂದಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್ತೆಂಡೂಲ್ಕರ್ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...