
ಹೊಸದಿಲ್ಲಿ, ಸೆ.3: ಕಾಮನ್ವೆಲ್ತ್ ಕ್ರೀಡಾ ಕೂಟದ ಖರ್ಚುವೆಚ್ಚದ ಕುರಿತಾದ ಪ್ರಶ್ನೆ ಗಳನ್ನು ‘ಹಾಸ್ಯಾಸ್ಪದ’ ಎಂದು ಟೀಕಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ, ಉತ್ಸವದ ಕಡೆಗೆ ಹಾಗೂ ಈ ಬೃಹತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಗಿ ರುವ ‘ಅದ್ಭುತ’ ಕ್ರೀಡಾಂಗಣದಂತಹ ವಿಚಾರಗಳನ್ನು ಎತ್ತಿ ತೋರಿಸುವುದರತ್ತ ಗಮನ ಹರಿಸಲಾಗುವುದೆಂದು ಇಂದು ಹೇಳಿದ್ದಾರೆ.
ಸಿಡಬ್ಲುಜಿಯ ಸಿದ್ಧತೆಯಲ್ಲಿ ಸ್ವಲ್ಪ ವಿಳಂಬವಾಗಿರುವುದು ನಿಜ. ತಾವು ಮಾಧ್ಯಮ ಹಾಗೂ ಇತರ ಸಾಮಾನ್ಯ ವಿಭಾಗಗಳಿಂದ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇವೆ. ಅದು ಸ್ವಾಗತಾರ್ಹ ಹಾಗೂ ತಾವು ಅಂತಹ ಟೀಕೆಗಳಿಂದ ಪಾಠ ಕಲಿಯುತ್ತೇವೆ ಎಂದು ಕ್ರೀಡೋತ್ಸ ವದ ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ಸಚಿವ ಮಂಡಳಿಯ ಅಧ್ಯಕ್ಷ ರೆಡ್ಡಿ ನುಡಿದಿದ್ದಾರೆ.
ಇಲ್ಲಿನ ಗುರ್ಗಾಂವ್ ಮೆಟ್ರೊ ಸಂಪರ್ಕ ದಲ್ಲಿ ಕೇಂದ್ರೀಯ ಕಾರ್ಯಾಲಯ- ಕುತುಬ್ ಮಿನಾರ್ ಮಾರ್ಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕಾಮನ್ವೆಲ್ತ್ ಕ್ರೀಡಾಕೂಟದ ಖರ್ಚು ವೆಚ್ಚಗಳ ಬಗ್ಗೆ ಹಾಸ್ಯಾಸ್ಪದ ಮಾತುಕತೆ ನಡೆಯುತ್ತಿದೆ ಎಂದರು.
ಅವರು ಯಾರದೇ ಹೆಸರನ್ನು ಎತ್ತಿಲ್ಲ ವಾದರೂ, ಅಕ್ಟೋಬರ್ 3ರಿಂದ ನಡೆ ಯುವ ಕ್ರೀಡಾವಳಿಯ ಖರ್ಚು- ವೆಚ್ಚಗಳ ಕುರಿತಾಗಿ ಪ್ರಶ್ನೆಯೆತ್ತಿರುವ ಪಕ್ಷದ ಸಹೋದ್ಯೋಗಿ ಮಣಿಶಂಕರ ಅಯ್ಯರ್ ಹಾಗೂ ಇತರ ಕೆಲವರ ವಿರುದ್ಧ ಈ ಟೀಕೆ ಮಾಡಿದ್ದಾರೆಂಬುದು ಸುಸ್ಪಷ್ಟ.
ಕ್ರೀಡಾ ಸಂಬಂಧಿ ಯೋಜನೆಗಳಲ್ಲಿ ‘ಭ್ರಷ್ಟಾಚಾರ’ ಎಸಗಿದವರನ್ನು ‘ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ’ ಎಂದು ರೆಡ್ಡಿ ಎಚ್ಚರಿಸಿದರು.ಆದರೆ ನಮ್ಮ ಸಾಮಾನ್ಯ ಮನಃಸ್ಥಿತಿಯನ್ನು ಬದಲಿಸಿ, ಕಾಮನ್ವೆಲ್ತ್ ಕ್ರೀಡೋತ್ಸವ ಆಚರಿಸಲು ಮುಂದಾಗಬೇಕಾದ ಸಮಯ ಬಂದಿದೆ ಎಂದ ಅವರು, ಈಗಾಗಲೇ ನಿರ್ಮಿಸಲಾಗಿರುವ ಅದ್ಭುತ ವಿಶ್ವದರ್ಜೆಯ ಕ್ರೀಡಾಂಗಣದ ವಿಚಾರದ ಮೇಲೆ ಬೆಳಕು ಚೆಲ್ಲುವಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.
ಸಿಡಬ್ಲುಸಿಯ ಖರ್ಚು ವೆಚ್ಚಗಳ ಬಗ್ಗೆ ತಾನು ಸಂಸತ್ತಿನಲ್ಲಿ ನೀಡಿದ ಹೇಳಿಕೆ ಯನ್ನುಲ್ಲೇಖಿಸಿದ ರೆಡ್ಡಿ, ಕೇಂದ್ರ ಸರಕಾರವು ಕಾಮನ್ವೆಲ್ತ್ ಕ್ರೀಡಾ ಸಂಬಂಧಿ ವಿಷಯಗಳಿ ಗಾಗಿ ರೂ. 11,494 ಕೋಟಿಗಳನ್ನು ವೆಚ್ಚ ಮಾಡಿದೆ ಹಾಗೂ ದಿಲ್ಲಿ ಸರಕಾರವು ಎಲ್ಲ ಮೂಲ ಸೌಲಭ್ಯ ಮತ್ತಿತರ ಯೋಜನೆಗಳಿ ಗಾಗಿ ಒಟ್ಟು ರೂ. 16 ಸಾವಿರ ಕೋಟಿಗಳನ್ನು ಖರ್ಚು ಮಾಡಿದೆ ಎಂದರು.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...