♦ ಈಶ್ವರಪ್ಪ-ಯಡಿಯೂರಪ್ಪ ನನ್ನ ದೇವರುಗಳು. ಅವರಿಂದಾಗಿಯೇ ನಾನಿಂದು ಇಷ್ಟು ದೊಡ್ಡ ವ್ಯಕ್ತಿಯಾಗಿದ್ದೇನೆ.
-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಹಿತಿ ತಂತ್ರಜ್ಞಾನ ಸಚಿವ
ಓಟು ಕೊಟ್ಟು ಗೆಲ್ಲಿಸಿದ ಮತದಾರರು ರಾಕ್ಷಸರೆ?
♦ನಿತೀಶ್ ಸರಕಾರ ಕಿತ್ತು ಒಗೆಯೋ ತನಕ ನಾನು ನಿದ್ದೆ ಮಾಡಲಾರೆ.
-ಲಾಲು ಪ್ರಸಾದ್ ಯಾದವ್, ಮಾಜಿ ರೈಲ್ವೆ ಸಚಿವ
ಅಧಿಕಾರವಿಲ್ಲದೇ ಇರುವಾಗ ನಿದ್ದೆ ಬಾರದೇ ಇರುವುದು ಸಹಜವೇ ಬಿಡಿ.
♦ ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ಹಾಗೂ ಪಾಕಿಸ್ತಾನವು ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಹೊಂದುವುದು ಬಹಳ ಅಗತ್ಯವಾಗಿದೆ.
-ಪಿ.ಜೆ. ಕ್ರಾಲಿ, ಅಮೆರಿಕಾ ವಿದೇಶಾಂಗ ಇಲಾಖೆ ವಕ್ತಾರ
ಅದಕ್ಕೆ ನೀವು ಅವಕಾಶ ನೀಡುವುದು ಅದಕ್ಕಿಂತಲೂ ಅಗತ್ಯವಾದುದು.
♦ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಕ್ಕೆ ತಡೆಯೊಡ್ಡುವ ಶಕ್ತಿಗಳ ವಿರುದ್ಧ ಬೀದಿಗಿಳಿಯುವುದು ಅನಿವಾರ್ಯ.
-ಡಾ.ವಿ.ಎಸ್. ಆಚಾರ್ಯ, ಗೃಹ ಸಚಿವ
ಹೀಗೆ ಮಾತನಾಡುತ್ತಿದ್ದರೆ ಈ ನಾಡಿನ ರೈತರೇ ನಿಮ್ಮನ್ನು ವಿಧಾನಸೌಧದಿಂದ ಬೀದಿಗಿಳಿಸುತ್ತಾರೆ.
♦ ಕೇವಲ ಅಧಿಕಾರ ಗಳಿಸುವುದೇ ಬಿಜೆಪಿಯ ಗುರಿಯಲ್ಲ.
-ನಳಿನ್ ಕುಮಾರ್ ಕಟೀಲ್, ಸಂಸದ
ಹಣ ಮಾಡುವುದೂ ಬಿಜೆಪಿಯ ಗುರಿಯಲ್ಲೊಂದು ಎನ್ನುವುದನ್ನು ಬಳ್ಳಾರಿ ಸಾರಿ ಸಾರಿ ಹೇಳುತ್ತಿದೆಯಲ್ಲ.
♦ ರೆಡ್ಡಿ ಸಚಿವರು ತಮಗೆ ದೇವರೇನೂ ಅಲ್ಲ.
-ರೇಣುಕಾಚಾರ್ಯ, ಅಬಕಾರಿ ಸಚಿವ
ರಾಜಕೀಯದಲ್ಲಿ ದೇವರು ದೆವ್ವದ ರೂಪ ತಾಳಲು ಹೆಚ್ಚು ಹೊತ್ತು ಬೇಕಾಗಿಲ್ಲ.
♦ ಯಾರೂ ವಯಸ್ಸಿನಿಂದ ದೊಡ್ಡವರಾಗುವುದಿಲ್ಲ, ಕೃತಿಯಿಂದ ದೊಡ್ಡವರಾಗುತ್ತಾರೆ.
-ನಾಡೋಜ ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ
ಆದರೆ ಯಾವುದೇ ಕೃತಿ ಭೈರಪ್ಪನನ್ನು ಯಾಕೆ ದೊಡ್ಡವರನ್ನಾಗಿಸಿಲ್ಲ?
♦ ನಕಲಿ ಹಾಗೂ ಕಳ್ಳಭಟ್ಟಿ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ.
-ರೇಣುಕಾಚಾರ್ಯ, ಅಬಕಾರಿ ಸಚಿವ
ಅಸಲಿ ಸಾರಾಯಿ ಕುಡಿದು, ನಕಲಿ ಸಾರಾಯಿಯನ್ನು ತಡೆಯಿರಿ ಎನ್ನುತ್ತಿದ್ದೀರಾ?
♦ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಈಗಲೂ ನಾನೇ ಒಡೆಯ.
-ಸುರೇಶ್ ಕಲ್ಮಾಡಿ, ಕಾಮನ್ವೆಲ್ತ್ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ
ಅಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಕೂಡ.
♦ ಪಾಕಿಸ್ತಾನದಲ್ಲಿ ಸೇನಾ ಕ್ಷಿಪ್ರಕ್ರಾಂತಿ ಪ್ರಯತ್ನ ್ಕೆ ಸೇನೆ ಕೈ ಹಾಕುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ.
-ಆಸಿಫ್ ಅಲಿ ಝರ್ದಾರಿ, ಪಾಕ್ ಅಧ್ಯಕ್ಷ
ಇಷ್ಟೆಲ್ಲ ಪ್ರಯತ್ನಿಸಿದರೂ, ಪರಿಸ್ಥಿತಿ ಹದಗೆಟ್ಟಿಲ್ಲ ಎಂದು ಅಚ್ಚರಿಯೆ?
♦ ಹಳದಿ ಪತಾಕೆಗೆ ಯಾರಾದರೂ ಅವಮಾನ ಮಾಡಿದಲ್ಲಿ ಇಡೀ ಬಿಲ್ಲವ ಸಮಾಜ ಸಹಿಸುವುದಿಲ್ಲ.
-ಜನಾರ್ದನ ಪೂಜಾರಿ, ಕೇಂದ್ರ ಮಾಜಿ ಸಚಿವ
ಕಳೆದ ಚುನಾವಣೆಯಲ್ಲಿ ಬಿಲ್ಲವರು ಸಹಿಸದೇ ಇರುವಂತಹ ಅವಮಾನ ಅದೇನು ಮಾಡಿದ್ದಿರಿ?
♦ ಇತ್ತೀಚಿನ ಕೆಲವು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವ ‘ಕೇಸರಿ ಭಯೋತ್ಪಾದಕರು’ ಸೇರಿದಂತೆ ಎಲ್ಲ ರೀತಿಯ ಭಯೋತ್ಪಾದಕ ಸಂಘಟನೆಗಳ ಬಗ್ಗೆ ರಾಜ್ಯಗಳ ಪೊಲೀಸರು ಕಟ್ಟುನಿಟ್ಟಿನ ನಿಗಾ ಇಡಬೇಕು.
-ಪಿ.ಚಿದಂಬರಂ, ಕೇಂದ್ರ ಗೃಹ ಸಚಿವ
ಕೊನೆಗೂ ಕಣ್ಣನ್ನು ಕವಿದ ಕೇಸರಿ ಬದಿಗೆ ಸರಿಯಿತೆ ಗೃಹ ಸಚಿವರೆ?
♦ ವ್ಯಕ್ತಿ ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸಗಳಿಂದ ಸಮಾಜ ಆತನನ್ನು ನಿರಂತರವಾಗಿ ನೆನಪಿಸುತ್ತದೆ.
-ಕುಂಬ್ಳೆ ಸುಂದರ ರಾವ್, ಯಕ್ಷಗಾನ ಅಕಾಡಮಿ ಅಧ್ಯಕ್ಷ
ಸುರತ್ಕಲ್ ಗಲಭೆಯಲ್ಲಿ ನೀವು ಮಾಡಿದ ಒಳ್ಳೆಯ ಕೆಲಸಗಳನ್ನು ಸಂತ್ರಸ್ತರು ಈಗಲೂ ಕಣ್ಣೀರು ಸುರಿಸುತ್ತಾ ನೆನಪಿಸಿಕೊಳ್ಳುತ್ತಾರೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...