mail-img print-img

ಓ ಮೆಣಸೇ

ಸೋಮವಾರ - ಜನವರಿ -23-2012

*ನನ್ನ ತಂದೆ ಹಾಕಿ ಕೊಟ್ಟ ಮಾರ್ಗದಲ್ಲೇ ರಾಜಕೀಯದಲ್ಲಿ ನಡೆಯುತ್ತೇನೆ.

-ಮಧು ಬಂಗಾರಪ್ಪ, ದಿ.ಬಂಗಾರಪ್ಪರ ಮಗ

=ಜಾಗರೂಕರಾಗಿರಿ. ಆ ದಾರಿಯಲ್ಲಿ ಮುಂದೆ ಅಸಂಖ್ಯ ಅಪಾಯಕಾರಿ ತಿರುವುಗಳಿವೆ.  

 


*ನಾನು ಯಾವುದೇ ವಿಷಯವನ್ನು ಕೈಗೆತ್ತಿಕೊಳ್ಳುವ ಮುನ್ನ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವವನಾಗಿದ್ದೇನೆ.

-ದೇವೇಗೌಡ, ಮಾಜಿ ಪ್ರಧಾನಿ

=ಕಾಂಗ್ರೆಸ್ ಜೊತೆ ಅಧಿಕಾರವನ್ನು ಪ್ರತ್ಯಕ್ಷ ಕಂಡರೂ ಮತ್ತೆ ಬಿಜೆಪಿ ಜೊತೆ ಅದನ್ನು ಪ್ರಮಾಣಿಸಿ ನೋಡಿದ ಭವ್ಯ ಪರಂಪರೆ ನಿಮ್ಮದಲ್ಲವೇ?
   


*ರಾಜ್ಯದ ಬಿಜೆಪಿ ಸರಕಾರ ಹುಚ್ಚರ ಸಂತೆ.

-ಕುಮಾರ ಸ್ವಾಮಿ, ಮಾಜಿ ಮುಖ್ಯಮಂತ್ರಿ

=ಆ ಹುಚ್ಚಿಗೆ ಹಿಂದೊಮ್ಮೆ ಮಾಡಿದ ಸಹವಾಸ ದೋಷವೇ ಕಾರಣ ಎಂದು ತಜ್ಞ ವೈದ್ಯರು ವರದಿ ಕೊಟ್ಟಿದ್ದಾರಂತೆ.  


*ಅಷ್ಟಮಠಗಳೊಳಗಿನ ಗೊಂದಲಗಳ ಬಗ್ಗೆ ಸಾರ್ವಜನಿಕ ಚರ್ಚೆ ಒಳ್ಳೆಯದಲ್ಲ.

-ಡಾ.ವಿ.ಎಸ್.ಆಚಾರ್ಯ, ಸಚಿವ

 

=ಇಂತಹ ಅನಿಷ್ಟಗಳನ್ನು ದಾರಿಗೆ ತರುವುದು ಬೇಡವೆಂಬ ಸದುದ್ದೇಶವೇ?


*ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನನ್ನ ವಿಶ್ವಾಸ ಪಾತ್ರ ಸ್ನೇಹಿತ.

-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

=ನೀವು ಹೀಗೆಲ್ಲ ಅವರನ್ನು ತಮಾಶೆ ಮಾಡುವುದು ನಿಮ್ಮ ಘನತೆಗೆ ತಕ್ಕುದಾದುದಲ್ಲ.


*ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ
 

-ಡಾ.ಚಂದ್ರಶೇಖರ ಪಾಟೀಲ, ಸಾಹಿತಿ

=ಮತ್ತೆ ಮತ್ತೆ ಕನ್ನಡಿಗರನ್ನು ಕೆಣಕಿದರೆ ಹುಶಾರ್! 


*ವಿವಾದಿತ ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ರಾಜ್ಯ ಸರಕಾರ ಬದ್ಧ.

-ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ

=ನಿಮ್ಮ ನಾಲಗೆ ತಿರುಗುವ ವೇಗದ ಬಗ್ಗೆಯೇ ಈಗ ಜನರಿಗೆ ಹೆಚ್ಚು ಭಯ!  


*ಬಿಜೆಪಿ ಶೇ. 70ರಷ್ಟು ಶುದ್ಧವಾಗಿದ್ದರೆ, ಉಳಿದ ಪಕ್ಷಗಳ ಶುದ್ಧತೆ ಪ್ರಮಾಣ ಶೇ.20ಮಾತ್ರ.

-ಯಶವಂತ್ ಸಿನ್ಹಾ, ಬಿಜೆಪಿ ಹಿರಿಯ ನಾಯಕ

=ನೀವು ಬಳಸುವ ಸೋಪೇ ನಿಜವಾದ ಸೋಪು! ಉಳಿದವೆಲ್ಲ ಬರೀ ಓಳು.


*ಸಮೃದ್ಧ ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿ ದಿಸೆಯಲ್ಲಿ ಜಾತ್ಯತೀತ ನಿಲುವು ಮತ್ತು ನೆಲದ ಪ್ರೀತಿ ಮುಖ್ಯ.
 

-ಎನ್.ಆರ್.ನಾರಾಯಣ ಮೂರ್ತಿ, ಇನ್ಫೋಸಿಸ್ ಸಂಸ್ಥಾಪಕ

=ಸಮೃದ್ಧ ಸ್ವಕುಟುಂಬ ನಿರ್ಮಾಣ ಮಾಡಿ ಸುಸ್ತಾದವರ ಸಂಧ್ಯಾರಾಗವಿದು


*ನಾನು ಸೇನೆಯಲ್ಲಿದ್ದುದರಿಂದ ಸೇನೆಯನ್ನು ಯಾವಾಗಲೂ ಬೆಂಬಲಿಸುತ್ತೇನೆ.

-ಪರ್ವೇಝ್ ಮುಶರ್ರಫ್, ಪಾಕ್ ಮಾಜಿ ಅಧ್ಯಕ್ಷ

=ನಿಮ್ಮದು ಕಪಿಸೇನೆ ಎಂಬ ಅಭಿಪ್ರಾಯಕ್ಕೆ ಪಾಕಿಸ್ತಾನದ ಜನರ ಭಾರೀ ಸಹಮತದ ಬೆಂಬಲವಿದೆಯಂತೆ.  


*ಇನ್ನೊಂದು ಸಲ ಮುಖ್ಯಮಂತ್ರಿ ಆಗಲ್ಲ ಅನ್ನೋಕೆ ನಾನೇನು ಸನ್ಯಾಸಿಯಲ್ಲ.

-ಯಡಿಯೂರಪ್ಪ, ಮಾಜಿಮುಖ್ಯಮಂತ್ರಿ

 

=ಸದಾನಂದ ಗೌಡರು ನೀವು ಯಡಿಯೂರಪ್ಪನೇ ಅಲ್ಲ ಎಂದು ಹೇಳುತ್ತಿದ್ದಾರಲ್ಲ...  


*ಪ್ರಸ್ತುತ ರಾಜಕೀಯ ಸ್ಥಿತಿಯನ್ನು ಗಮನಿಸಿದರೆ ಯಾವುದು ನಿಸ್ವಾರ್ಥ ಸೇವೆ, ಯಾವುದು ಮೋಸ ಎಂಬುದೇ ತಿಳಿಯುವುದಿಲ್ಲ.

-ಸುಭಾಷ್ ಭರಣಿ, ನಿವೃತ್ತ ಪೊಲೀಸ್ ಅಧಿಕಾರಿ

=ಇನ್ನೂ ಒಂದೆರಡು ಪಕ್ಷ ಬದಲಾಯಿಸಿದರೆ ತಿಳಿಯಬಹುದೇನೋ? ಪ್ರಯತ್ನ ಬಿಡಬಾರದು ನೋಡಿ.

 


*ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡವರು ಮಾನವರಲ್ಲ.
 

-ನ್ಯಾ.ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ

=ಅಂತಹವರಿಗೆ ಯಡಿಯೂರಪ್ಪ ಎಂದು ನಾಮಕರಣ ಮಾಡಿದರೆ ಹೇಗೆ?  


*ಬಿಜೆಪಿ ಸರಕಾರ ಕೇವಲ ಮಠಮಾನ್ಯಗಳಿಗೆ ಮೀಸಲಾಗಿಲ್ಲ.
 

-ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ

=ಮಾನ್ಯ ಮಠಗಳಿಗೆ ಮಾತ್ರ ಮೀಸಲು ಎಂದು ತಿದ್ದಿಕೊಳ್ಳೋಣ ಬಿಡಿ. 


*ದೇವೇಗೌಡರು ನನಗೆ ಮಾದರಿ.
 

-ಪೂಜಾಗಾಂಧಿ, ಜೆಡಿಎಸ್ ಸೇರಿದ ಸಿನಿಮಾ ನಟಿ

=ನೀವು ಹೇಳುವ ಸುಳ್ಳಿಗೆ ದೇವೇಗೌಡರೇ ಬೆಚ್ಚಿ ಬೀಳಬಹುದುರೀ...


*ನಮಗೆ ಚಾರಿತ್ರ ಹಾಗೂ ಮನೋಸ್ಥೈರ್ಯವನ್ನು ವೃದ್ಧಿಸುವಂತಹ ಶಿಕ್ಷಣ ಬೇಕು.
 

-ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ

=ನಿಮಗೆ ಶಿಕ್ಷಣದ ಅಗತ್ಯವಿದೆ ಎಂಬ ಬಗ್ಗೆ ಯಾರಿಗೂ ಸಂಶಯವಿಲ್ಲ.  





Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್