= ಭಾರತದಲ್ಲಿ ನೀವು ಸೃಷ್ಟಿಸುತ್ತಿರುವ ಸಮಸ್ಯೆಗಳ ಹಿಂದೆ ಅಧಿಕಾರದ ಅಭಾವ ಕಾರಣವೆ?
*ಗ್ರಾಮ ಸಭೆಗಳು ರಾಜಕೀಯ ಕಾರಣದಿಂದ ತನ್ನ ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆ.
=ವಿಧಾನಸಭೆ ರಾಜಕೀಯದಿಂದ ಗಬ್ಬೆದ್ದು ಹೋಗಿದೆಯಲ್ಲ, ಅದಕ್ಕೆ ಏನಂತೀರಿ?
*ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣಿಗಳ ನೇಮಕಾತಿ ಇಲ್ಲ.
=ಸ್ವಾಮೀಜಿಗಳೇ ರಾಜಕಾರಣಿಗಳ ಪಾತ್ರ ನಿರ್ವಹಿಸುತ್ತಿರುವಾಗ ರಾಜಕಾರಣಿಗಳ ನೇಮಕಾತಿಯ ಅಗತ್ಯವೇನಿದೆ?
*ರಾಜ್ಯದ ಎಲ್ಲ ರಸ್ತೆಗಳಲ್ಲಿ 15 ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುತ್ತದೆ.
=ಮುಚ್ಚುವ ಮೊದಲು ಅದರೊಳಗೆ ನಮ್ಮ ರಾಜಕಾರಣಿಗಳನ್ನು ಹಾಕಿದ್ದರೆ ಉಪಕಾರವಾಗುತ್ತಿತ್ತು.
*ಜನಾರ್ದನ ರೆಡ್ಡಿಯವರ ಬಿಡುಗಡೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಹೊಸ ಪಕ್ಷದ ರಚನೆ ಕೂಡ ತುಸು ವಿಳಂಬವಾಗಿದೆ.
=ಅವರ ಬಿಡುಗಡೆಗೆ ಕಾಯದೆ, ನೀವೇ ಜೈಲು ಸೇರಿ ಅಲ್ಲೇ ಏಕೆ ಒಟ್ಟಾಗಿ ಪಕ್ಷ ರಚಿಸಬಾರದು?
*ದಲಿತ ಹೆಣ್ಣುಮಗಳ ಯಶಸ್ಸನ್ನು ಸಹಿಸಲು ಎದುರಾಳಿಗಳಿಗೆ ಆಗುತ್ತಿಲ್ಲ.
=ಭ್ರಷ್ಟಾಚಾರದಲ್ಲಿ ಈ ಪರಿಯ ಯಶಸ್ಸು ಸಾಧಿಸಿದರೆ, ಮೇಲ್ವರ್ಣೀಯರಿಗೆ ಹೊಟ್ಟೆಕಿಚ್ಚಾಗುವುದಿಲ್ಲವೆ?
*ಧರ್ಮ ಅರಿತು ಬಾಳಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಬದುಕು ಸಾಧ್ಯ.
=ಬಾಳಬಾರದು ಎಂದು ನಿಮಗೆ ಯಾರಾದರೂ ಕಟ್ಟಪ್ಪಣೆ ಮಾಡಿದ್ದಾರೆಯೆ?
*ಯಡಿಯೂರಪ್ಪ ರಾಜ್ಯ ಆಳಿದ ಮುಖ್ಯಮಂತ್ರಿಗಳಲ್ಲಿಯೇ ಅಗ್ರಗಣ್ಯರು.
=ಆ ಗಣ್ಯರನ್ನು ತಮ್ಮ ಪಕ್ಷ ಸ್ವಾಗತಿಸುವುದಕ್ಕೆ ಹೊರಟಿದೆಯೆ?
*ಕಾಂಗ್ರೆಸ್ ಸಾಗರವಿದ್ದಂತೆ. ಒಳ ಹರಿವು ಜಾಸ್ತಿ.
=ಭಾರೀ ತಿಮಿಂಗಿಲಗಳು, ಶಾರ್ಕ್ಗಳೂ ಜಾಸ್ತಿ.
*ಭ್ರಷ್ಟಾಚಾರ ಆರೋಪ ಸಾಬೀತಾದರೆ ನಾನು ಬಹಿರಂಗವಾಗಿ ನೇಣಿಗೆ ಶರಣಾಗಲು ಸಿದ್ಧ.
=ಸಾಬೀತಾಗದೇ ಇದ್ದರೆ ಗುಟ್ಟಾಗಿ ನೇಣಿಗೆ ಶರಣಾಗಲು ಸಿದ್ಧವೆ?
*ಸ್ಪೀಕರ್ ಬೋಪಯ್ಯರ ಪರಮಾಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ.
=ಯಡಿಯೂರಪ್ಪ ಅವರನ್ನು ಹೊರತು ಪಡಿಸಿ, ಎಂದು ಹೇಳುವುದನ್ನು ಮರೆತು ಬಿಟ್ಟರಲ್ಲ?
*ರಾಜ್ಯದ ಕರಾವಳಿಯಲ್ಲಿ ಕಡಲ ಕೊರೆತ ತಡೆಯುವ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
=ರಾಜಕಾರಣಿಗಳ ಬಾಯಿಗೆ ಮಣ್ಣು ತುರುಕುವ ಮೂಲಕ ಕಾಮಗಾರಿ ಆರಂಭವಾಗಲಿ. ಕೊರೆತ ನಿಲ್ಲಲಿ.
*ಮಡೆಸ್ನಾನ ತಡೆಯಲು ಎಲ್ಲರ ಸಹಕಾರ ಅಗತ್ಯ.
=ಮೊದಲು ನಿಮ್ಮ ಸಹಕಾರ.
*ಹಿಂದುಳಿದವರ ಕಣ್ಣೀರು ಒರೆಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ.
=ಕಣ್ಣೀರು ಸುರಿಸದಂತೆ ಮಾಡಿದರೆ ಒರೆಸುವ ಕೆಲಸ ಉಳಿಯುತ್ತದಲ್ಲ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...