
ಹೊಸದಿಲ್ಲಿ, ಸೆ.3: ಭಾರತೀಯ ವಾಯುಸೇನೆಯು ಶುಕ್ರವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ರಿಗೆ ಗೌರವ ಗ್ರೂಪ್ ಕ್ಯಾಪ್ಟನ್ ಹುದ್ದೆಯನ್ನು ಪ್ರದಾನ ಮಾಡಿತು. ಆ ಮೂಲಕ ಸಚಿನ್ ಐಎಎಫ್ನಿಂದ ಈ ಗೌರವ ಪಡೆದುಕೊಂಡ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ದೇಶಕ್ಕೆ ನೀಡಿರುವ ಸಚಿನ್ರ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಹೊಸದಿಲ್ಲಿಯ ವಾಯುಸೇನಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಐಎಎಫ್ ಹಿರಿಯಾಧಿಕಾರಿ ಮಾರ್ಶಲ್ ಪಿವಿ ನಾಕ್ ಸಚಿನ್ರಿಗೆ ಗೌರವ ಪ್ರದಾನ ಮಾಡಿದರು. 2008ರಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಭಾರತದ ಭೂಸೇನೆಯಿಂದ ಲೆಪ್ಟಿನಂಟ್ ಕರ್ನಲ್ ಗೌರವ ಪಡೆದಿದ್ದರು. ಮಲಯಾಳ ನಟ ಮೋಹನ್ಲಾಲ್ರನ್ನು ಕೂಡಾ ಕರ್ನಲ್ ಪದವಿ ನೀಡಿ ಗೌರವಿಸಲಾ ಗಿತ್ತು.
ಸಚಿನ್ರವರ ಗ್ರೂಪ್ ಕ್ಯಾಪ್ಟನ್ ಪದವಿಯು ಭೂ ಸೇನೆಯ ಕರ್ನಲ್ ರ್ಯಾಂಕ್ಗೆ ಸಮಾನವಾಗಿರಲಿದೆ. ‘ಐಎಎಫ್ನಿಂದ ಗೌರವ ಗ್ರೂಪ್ ಕ್ಯಾಪ್ಟನ್ ಪಡೆದಿರುವ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಗೌರವ ಸಂಪಾದಿಸಿದ್ದು ನನ್ನ ಕನಸು ನನಸಾಗಿದಂತಾಗಿದೆ’ ಎಂದು ಲಿಟ್ಲ್ ಮಾಸ್ಟರ್ ನುಡಿದರು.
ನಾನೀಗ ಭಾರತ ವಾಯುಸೇನೆಯ ಭಾಗವಾಗಿರುವು ದರಲ್ಲಿ ಹೆಮ್ಮೆಯಿದೆ. ಹೆಚ್ಚಿನ ಸಂಖ್ಯೆಯ ಯುವ ಜನತೆ ವಾಯುಸೇನೆಗೆ ಸೇರಬೇಕೆಂಬುದು ನನ್ನ ಬಯಕೆ. ವಾಯುಸೇನೆಗೆ ಸೇರುವ ಮೂಲಕ ದೇಶ ಸೇವೆ ಸಲ್ಲಿಸಬೇಕು. ಇದನ್ನು ಸಾಧಿಸಲು ಕನಸು ಕಾಣಬೇಕು. ಯಾಕೆಂದರೆ ಕನಸುಗಳು ಮಾತ್ರ ನನಸಾಗುತ್ತದೆ ಎಂದವರು ಸೇರಿಸಿದರು. ಸಚಿನ್ರಿಗೆ ಗ್ರೂಪ್ ಕ್ಯಾಪ್ಟನ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಜೂ.23ರಂದು ಘೋಷಿಸಿದ್ದರು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...