mail-img print-img

ಕ್ಲೀನ್ ಸ್ವೀಪ್ ಹಾದಿಯಲ್ಲಿ ಆಸ್ಟ್ರೇಲಿಯ

ಶನಿವಾರ - ಜನವರಿ -28-2012

  • ಎರಡನೆ ಇನಿಂಗ್ಸ್‌ನಲ್ಲೂ ಭಾರತದ ಕಳಪೆ ಬ್ಯಾಟಿಂಗ್
  • ಸೆಹ್ವಾಗ್ ಅರ್ಧಶತಕ

ಅಡಿಲೇಡ್, ಜ.27: ವೈಟ್ ವಾಶ್, ಕ್ಲೀನ್ ಸ್ವೀಪ್, ಶೂಟೌಟ್ ಏನು ಬೇಕಾದರೂ ಹೇಳಿ ಆಸ್ಟ್ರೇಲಿಯ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆಲುವಿನ ಹಾದಿಯಲ್ಲಿದೆ.

ಪಂದ್ಯದ ನಾಲ್ಕನೆ ದಿನವಾಗಿರುವ ಇಂದು ಆಸ್ಟ್ರೇಲಿಯ ವಿರುದ್ಧ ಗೆಲುವಿಗೆ ಎರಡನೆ ಇನಿಂಗ್ಸ್‌ನಲ್ಲಿ 500 ರನ್‌ಗಳ ಸವಾಲನ್ನು ಪಡೆದ ಭಾರತ 56 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 166 ರನ್ ಸಂಪಾದಿಸಿ ಸೋಲಿನ ಸುಳಿಯಲ್ಲಿದೆ.
ಭಾರತಕ್ಕೆ ಗೆಲುವಿಗೆ ಇನ್ನೂ 334 ರನ್‌ಗಳ ಆವಶ್ಯಕತೆ ಇದೆ. ಟೀಮ್ ಇಂಡಿಯಾಕ್ಕೆ ಇದು ದೊಡ್ಡ ಸವಾಲು ಅಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ತಂಡ ಈ ಗುರಿಯನ್ನು ತಲುಪುವುದು ಕಷ್ಟ ಸಾಧ್ಯ.

ಔಟಾಗದೆ 2 ರನ್ ಗಳಿಸಿರುವ ಇಶಾಂತ್ ಶರ್ಮ ಮತ್ತು ಇನ್ನೂ ಖಾತೆ ತೆರೆಯದಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಆಟವನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ 272ಕ್ಕೆ ಆಲೌಟಾದ ಭಾರತ ಎರಡನೆ ಇನಿಂಗ್ಸ್‌ನಲ್ಲೂ ಕಳಪೆ ಫಾರ್ಮ್‌ನ್ನು ಮುಂದುವರಿಸಿತು. ಗೌತಮ್ ಗಂಭೀರ್ 3 ರನ್ ಗಳಿಸಿ ಔಟಾದರು. ಬಳಿಕ ಎರಡನೆ ವಿಕೆಟ್‌ಗೆ ಹಂಗಾಮಿ ನಾಯಕ ವೀರೇಂದ್ರ ಸೆಹ್ವಾಗ್ ಮತ್ತು ಗೋಡೆ ಖ್ಯಾತಿಯ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ 66 ರನ್‌ಗಳ ಕೊಡುಗೆ ನೀಡಿದರು.

ಸೆಹ್ವಾಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕದ ಕೊಡುಗೆ ನೀಡಿದರು. 82 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಸೆಹ್ವಾಗ್ 53 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಲ್ಲಿ 62 ರನ್ ಗಳಿಸಿ ನಥಾನ್ ಲಿನ್‌ಗೆ ವಿಕೆಟ್ ಒಪ್ಪಿಸಿದರು.

ಸೆಹ್ವಾಗ್‌ನ್ನು ಹೊರತುಪಡಿಸಿದರೆ ವಿವಿಎಸ್ ಲಕ್ಷ್ಮಣ್ (35) ದೊಡ್ಡ ಕೊಡುಗೆ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹಿ ್ಲ22 ರನ್ ಗಳಿಸಿ ರನೌಟಾದರು. ಆದರೆ ಐದನೆ ವಿಕೆಟ್‌ಗೆ ಲಕ್ಷ್ಮಣ್ ಜತೆ ತಂಡದ ಖಾತೆಗೆ 56 ರನ್‌ಗಳನ್ನು ಜಮೆ ಮಾಡಿದರು.

ದ್ರಾವಿಡ್ (25), ಸಚಿನ್ ತೆಂಡುಲ್ಕರ್(13) ವಿಫಲರಾದರು. ಇದರೊಂದಿಗೆ ಸಚಿನ್ ತೆಂಡುಲ್ಕರ್‌ಗೆ ಆಸ್ಟ್ರೇಲಿಯ ಟೆಸ್ಟ್ ಸರಣಿಯಲ್ಲೂ ನೂರನೆ ಅಂತಾರಾಷ್ಟ್ರೀಯ ಶತಕ ಸಿಡಿಸಲು ಸಾಧ್ಯವಾಗಲಿಲ್ಲ. ನಥಾನ್ ಲಿನ್ ಅವರು ಸಚಿನ್, ಲಕ್ಷ್ಮಣ್ ಮತ್ತು ಸೆಹ್ವಾಗ್‌ರ ಮಹತ್ವದ ವಿಕೆಟ್‌ನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಸಚಿನ್ ವಿಕೆಟ್ ಪಡೆಯುವ ಕನಸನ್ನು ಲಿನ್ ನನಸಾಗಿಸಿದರು. ರ್ಯಾನ್ ಹ್ಯಾರೀಸ್ 2 ವಿಕೆಟ್ ಪಡೆದರು.

ಆಸ್ಟ್ರೇಲಿಯ 167/5: ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಸ್ಕೋರ್‌ನ್ನು ಕಲೆ ಹಾಕಿದ್ದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ಮಾಜಿ ನಾಯಕ ರಿಕಿ ಪಾಂಟಿಂಗ್ ಅರ್ಧಶತಕ (ಔಟಾಗದೆ 60)ದ ನೆರವಿನಲ್ಲಿ 46 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 167 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿತು.
ಭಾರತದ ಬೌಲರ್‌ಗಳು ಸಂಘಟಿತ ದಾಳಿ ನಡೆಸಿ ಆಸ್ಟ್ರೇಲಿಯ ದೊಡ್ಡ ಮೊತ್ತದ ಸ್ಕೋರ್‌ನ್ನು ದಾಖಲಿಸದಂತೆ ತಡೆ ನಿರ್ಮಿಸಿದರು. ಮೂರನೆ ದಿನದಾಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ 32 ಓವರ್‌ಗಳಲ್ಲಿ 117ರನ್‌ಗಳನ್ನು ಸೇರಿಸಿತು.

ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕದ ನೆರವು ನೀಡಿದ್ದ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಮಾಜಿ ನಾಯಕ ರಿಕಿ ಪಾಂಟಿಂಗ್ ಇನ್ನೊಂದು ಸೊಗಸಾದ ಇನಿಂಗ್ಸ್ ಕಟ್ಟುವ ಕನಸಿನೊಂದಿಗೆ ಬ್ಯಾಟಿಂಗ್‌ನ್ನು ನಾಲ್ಕನೆ ದಿನ ಮುಂದುವರಿಸಿದರು. ನಾಲ್ಕನೆ ವಿಕೆಟ್‌ಗೆ 71 ರನ್‌ಗಳ ಜತೆಯಾಟ ನೀಡಿದರು. ತಂಡದ ಸ್ಕೋರ್ 111 ಆಗಿದ್ದಾಗ ನಾಯಕ ಕ್ಲಾರ್ಕ್(37) ಅವರು ಯಾದವ್ ಎಸೆತಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಗೆ ಕ್ಯಾಚಿತ್ತರು.

ಇದರೊಂದಿಗೆ ಕೊನೆಯ ಬಾರಿಗೆ ಸರಣಿಯಲ್ಲಿ ಸೊಗಸಾದ ಇನಿಂಗ್ಸ್ ಕಟ್ಟುವ ಇವರ ಪ್ರಯತ್ನ ಫಲಿಸಲಿಲ್ಲ. ಮೈಕ್ ಹಸ್ಸಿ 15 ರನ್ ಗಳಿಸಿ ಔಟಾದರು. ಅಂತಿಮವಾಗಿ ರಿಕಿ ಪಾಂಟಿಂಗ್ ಔಟಾಗದೆ 60(96 ಎಸೆತ, 5 ಬೌಂಡರಿ) ಮತ್ತು ವಿಕೆಟ್ ಕೀಪರ್ ಹಡಿನ್ ಔಟಾಗದೆ 11(26 ಎಸೆತ, 2 ಬೌಂಡರಿ) ರನ್ ಗಳಿಸಿದ್ದಾಗ ನಾಯಕ ಮೈಕಲ್ ಕ್ಲಾರ್ಕ್ ಇನಿಂಗ್ಸ್ ಡಿಕ್ಲೇರ್ಡ್‌ ಮಾಡುವ ನಿರ್ಧಾರ ಕೈಗೊಂಡರು. ಭಾರತದ ಪರ ಆರ್ ಅಶ್ವಿನ್ 73ಕ್ಕೆ 2, ಝಹೀರ್ ಖಾನ್, ಇಶಾಂತ್ ಶರ್ಮ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಹಂಚಿಕೊಂಡರು.

ನಾಲ್ಕನೆ ದಿನದ ಹೈಲೈಟ್ಸ್
  • ಪಾಂಟಿಂಗ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದ್ದರು. ಎರಡನೆಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿದರು.
  • ಸಚಿನ್ ತೆಂಡುಲ್ಕರ್ ಶತಕವಿಲ್ಲದೆ 22 ಟೆಸ್ಟ್ ಇನಿಂಗ್ಸ್ ಆಡಿದ್ದಾರೆ.
  • ರಾಹುಲ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಎಡವಿದ್ದಾರೆ. ಅವರ ರನ್ ಸರಾಸರಿ 8 ಇನಿಂಗ್ಸ್‌ಗಳಲ್ಲಿ 194 ರನ್.
  • ಗಂಭೀರ್ ಹಾಗೂ ಸೆಹ್ವಾಗ್ 2010ರಲ್ಲಿ ಸೆಂಚುರಿಯನ್‌ನಲ್ಲಿ ಶತಕದ ಜತೆಯಾಟ ನೀಡಿದ್ದರು. ಆ ಬಳಿಕ ಅವರಿಂದ ಇಂತಹ ಸಾಧನೆ ಕಂಡು ಬರಲಿಲ್ಲ. 12 ಇನಿಂಗ್ಸ್‌ಗಳಲ್ಲಿ ಹೀಗೆ ಒಟ್ಟು 182 ರನ್ ಕಲೆ ಹಾಕಿದ್ದಾರೆ. ಅವರ ಈಗಿನ ಗರಿಷ್ಠ ಜತೆಯಾಟದ ಸ್ಕೋರ್ 27 ರನ್.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್