mail-img print-img

ಕುರ್‌ಆನ್: ವಚನ ಸಂಗ್ರಹ

ಮಂಗಳವಾರ - ಆಗಸ್ಟ್ -17-2010

                            ‘‘ ......ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರನಾಗಿದ್ದಾನೆ. ಆದರೆ ಹೆಚ್ಚಿನ ಮಾನವರು ಕೃತಜ್ಞತೆ ಸಲ್ಲಿಸುವುದಿಲ್ಲ. ’’ (2: 243)
                                                                                                                                * * *

                            ‘‘ ......ಅದೆಷ್ಟೋ ಸಲ ಒಂದು ಸಣ್ಣ ಗುಂಪು, ಅಲ್ಲಾಹನ ಅಪ್ಪಣೆಯಿಂದ, ದೊಡ್ಡ ಗುಂಪನ್ನು


ಸೋಲಿಸಿದ್ದುಂಟು. ಮತ್ತು ಖಂಡಿತವಾಗಿಯೂ ಅಲ್ಲಾಹನು ಸಹನಶೀಲರ ಜೊತೆಗಿದ್ದಾನೆ. ’’ (2: 249)
* * *
             ‘‘ ಸೌಜನ್ಯದ ಒಂದು ಮಾತು ಮತ್ತು ಕ್ಷಮೆಯು, ದಾನ ಮಾಡಿ ಪೀಡಿಸುವುದಕ್ಕಿಂತ ಉತ್ತಮ...... ’’ (2: 263)
* * *
 
                                ‘‘ ವಿಶ್ವಾಸಿಗಳೇ, ಅಲ್ಲಾಹನಲ್ಲಾಗಲಿ ಪರಲೋಕದಲ್ಲಾಗಲಿ ನಂಬಿಕೆ ಇಲ್ಲದೆ, ಕೇವಲ ಜನರಿಗೆ ತೋರಿಸುವುದಕ್ಕಾಗಿ ತನ್ನ ಸಂಪತ್ತನ್ನು ಖರ್ಚು ಮಾಡುವವನಂತೆ, ನೀವು ಋಣಭಾರ ಹೊರಿಸಿ ಮತ್ತು ಪೀಡಿಸಿ, ನಿಮ್ಮ ದಾನಗಳನ್ನು ವ್ಯರ್ಥಗೊಳಿಸಬೇಡಿ...... ’’ (2: 264)
                                                          * * *

                                         ‘‘ ಅವನು (ಅಲ್ಲಾಹನು) ತಾನಿಚ್ಛಿಸಿದವರಿಗೆ ಯುಕ್ತಿ (ಜಾಣ್ಮೆ)ಯನ್ನು ನೀಡುತ್ತಾನೆ. ಇನ್ನು, ಯಾರಿಗೆ ಯುಕ್ತಿಯನ್ನು ನೀಡಲಾಯಿತೋ ಅವನಿಗೆ ಧಾರಾಳ ಒಳಿತನ್ನು ನೀಡಲಾಯಿತು. ಬುದ್ಧಿಯುಳ್ಳವರ ಹೊರತು ಇತರರು ಪಾಠ ಕಲಿಯುವುದಿಲ್ಲ. ’’ (2: 269)
                                                        * * *
        ‘‘ ......ನೀವು ನಿಮ್ಮ ಮನದೊಳಗಿನ ವಿಚಾರಗಳನ್ನು ಬಹಿರಂಗಗೊಳಿಸಿದರೂ, ಗುಪ್ತವಾಗಿಟ್ಟರೂ ಅಲ್ಲಾಹನಂತು ಆ ಕುರಿತು ನಿಮ್ಮನ್ನು ವಿಚಾರಿಸುವನು...... ’’ (2: 284)
                                                       * * *
          
‘‘ ಅಲ್ಲಾಹನು ಯಾವ ಜೀವದ ಮೇಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆ ಹೊರಿಸುವುದಿಲ್ಲ...... ’’ (2: 286) *                                                       * *
   ‘‘ ಖಂಡಿತವಾಗಿಯೂ ಭೂಮಿಯಲ್ಲಿ ಮತ್ತು ಆಕಾಶದಲ್ಲಿ ಇರುವ ಯಾವ ವಸ್ತುವೂ ಅಲ್ಲಾಹನಿಂದ ಮರೆಯಾಗಿಲ್ಲ. ’’ (3: 5)
                                                           * * *
                      ‘‘ ಅವನೇ ಗರ್ಭದಲ್ಲೇ ನಿಮ್ಮನ್ನು ತಾನಿಚ್ಛಿಸುವಂತೆ ಚಿತ್ರಿಸುವವನು ..... ’’ (3: 6)
                                                          * * *
                          ‘‘ ಹೇಳಿರಿ! ವಿಶ್ವ ಸಾಮ್ರಾಜ್ಯದ ಒಡೆಯನಾದ ಅಲ್ಲಾಹನೇ, ನೀನು ನೀನಿಚ್ಛಿಸಿದವರಿಗೆ ಸಾಮ್ರಾಜ್ಯವನ್ನು ನೀಡುವೆ ಮತ್ತು ನೀನಿಚ್ಛಿಸಿದವರಿಂದ ಸಾಮ್ರಾಜ್ಯವನ್ನು ಕಿತ್ತುಕೊಳ್ಳುವೆ. ಹಾಗೆಯೇ ನೀನು, ನೀನಿಚ್ಛಿಸಿದವರಿಗೆ ಗೌರವ ನೀಡುವೆ ಮತ್ತು ನೀನಿಚ್ಛಿಸಿದವರನ್ನು ಅಪಮಾನಿತರಾಗಿಸುವೆ. ಒಳಿತೆಲ್ಲವೂನಿನ್ನ ಕೈಯಲ್ಲಿದೆ. ಖಂಡಿತವಾಗಿಯೂ ನೀನು ಎಲ್ಲವನ್ನೂ ಮಾಡಬಲ್ಲವನು. ’’ (3: 26)
                                                          * * *
 

                                    ‘‘ ........ಅಲ್ಲಾಹನು, ದಾಸರ ಪಾಲಿಗೆ ತುಂಬಾ ವಾತ್ಸಲ್ಯಮಯಿಯಾಗಿದ್ದಾನೆ. ’’ (3: 30) ‘‘ (ದೂತರೇ) ಹೇಳಿರಿ; (ಜನರೇ ), ನೀವು ಅಲ್ಲಾಹನನ್ನು ಪ್ರೀತಿಸುವಿರಾದರೆ, ನನ್ನನ್ನು ಅನುಸರಿಸಿರಿ. ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು..... ’’ (3: 31)
                                                      * * *
      ‘‘ ಅವರೇನು, ಅಲ್ಲಾಹನ ಧರ್ಮದ ಬದಲು ಬೇರೇನನ್ನಾದರೂ ಹುಡುಕುತ್ತಿದ್ದಾರೆಯೇ? ನಿಜವಾಗಿ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ತಮ್ಮಿಚ್ಛೆಯಿಂದಲೂ ಅನಿವಾರ್ಯವಾಗಿಯೂ ಅವನಿಗೆ ಶರಣಾಗಿ ಬಿಟ್ಟಿವೆ ಮತ್ತು ಎಲ್ಲರೂ ಅವನ ಕಡೆಗೇ ಮರಳಿಸಲ್ಪಡುವರು. ’’ (3: 83)
                                                    * * *
       ‘‘ ನಿಮಗೆ ಪ್ರಿಯವಾದುದನ್ನು ನೀವು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿಬಿಡುವ ತನಕ, ನೀವು ಒಳಿತಿನ ಸ್ಥಾನವನ್ನು ತಲುಪಲಾರಿರಿ. ಇನ್ನು ನೀವು ಮಾಡುವ ಪ್ರತಿಯೊಂದು ಖರ್ಚಿನ ಬಗ್ಗೆಯೂ ಅಲ್ಲಾಹನು ಬಲ್ಲವನಾಗಿದ್ದಾನೆ. ’’ (3: 92)
                                                     * * *
     ‘‘ ಇನ್ನು ನೀವೆಲ್ಲ ಜೊತೆಯಾಗಿ ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿಯಿರಿ ಮತ್ತು ವಿಚ್ಛಿದ್ರರಾಗಬೇಡಿರಿ...... ’’ (3: 103)
                                                      * * *
       
                        ‘‘ (ಜನರನ್ನು) ಒಳಿತಿನೆಡೆಗೆ ಆಮಂತ್ರಿಸುವ ಹಾಗೂ ಸತ್ಕಾರ್ಯವನ್ನು ಆದೇಶಿಸುವ ಮತ್ತು ಕೆಡುಕಿನಿಂದ ತಡೆಯುವ ಗುಂಪೊಂದು ನಿಮ್ಮಲ್ಲಿರಬೇಕು. ಅವರೇ ವಿಜಯಿಗಳಾಗುವವರು. ’’ (3: 104)

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್